ಸಂಪ್ರದಾಯವಾದದ ಸಮಯದಲ್ಲಿ ’ರ್‍ಯಾಡಿಕಲ್’ ರಾಜಕೀಯ

Source: sonews | By Staff Correspondent | Published on 10th September 2019, 10:21 PM | National News | Special Report | Don't Miss |

ಗೋಪಾಲ್ ಗುರು

ಭಾರತದ ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ರ್ಯಾಡಿಕಲ್ ಶಕ್ತಿಗಳ ರಾಜಕೀಯವು ತನ್ನ ಸಮರ್ಥನೆಯನ್ನು ತನ್ನೊಳಗಿನ ಪರಿವರ್ತನಾವಾದಿ ಸತ್ವಕ್ಕಿಂತ ಹೆಚ್ಚು ಮತಶಕ್ತಿಯನ್ನು ನೈತಿಕ ಶಕ್ತಿಯ ಜೊತೆಗೆ ಬೆಸೆಯಲಾಗದ ಜನರ ವೈಫಲ್ಯದಲ್ಲಿ ಕಂಡುಕೊಳ್ಳುತ್ತಿದೆ. ಉದಾಹರಣೆಗೆ ಹಿಂಸಾಚಾರಗಳು ನಿರ್ದಿಷ್ಟವಾಗಿ ಕಾನೂನು ಪಾಲನೆಗೆ ಮುಜುಗರವನ್ನು ಹಾಗೂ ಸಾರ್ವತ್ರಿಕವಾಗಿ ಮಾನವ ಕುಲಕ್ಕೆ ಅಪಮಾನವನ್ನು ಮಾಡುತ್ತದಾದ್ದರಿಂದ ಎಲ್ಲಾ ಬಗೆಯ ಹಿಂಸೆಯನ್ನು ನಿರಾಕರಿಸುವುದರಲ್ಲಿ ಮತದಾರರ ನೈತಿಕ ಶಕ್ತಿ ಅಡಗಿದೆ. ರೀತಿ ಹಿಂಸೆಯನ್ನು ನಿರಾಕರಿಸುವ ಮೂಲಕವೇ ನೈತಿಕ ಶಕ್ತಿಯ ಜೊತೆ ಬೆಸೆದುಕೊಂಡಿರುವ ಸರಿತವು ಸಾಬೀತುಗೊಳ್ಳಲು ಸಾಧ್ಯ. ಗುಂಪುದಾಳಿಗಳು (ಲಿಂಚಿಂಗ್) ಅಂಥಾ ಎರಡೂ ವರ್ಗೀಕರಣದ ಅರ್ಹತೆಯನ್ನು ಪಡೆದುಕೊಳ್ಳುತ್ತದೆಂದು  ಹೇಳಬಹುದು. ಯಾವುದೋ ಒಂದು ರಾಜ್ಯದ, ಒಂದು ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಘಸಂಸ್ಥೆಯು ಮಾಡುವ ಹಿಂಸೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೇರೆಬೇರೆ ರಾಜ್ಯದ ಜನರನ್ನು ಪ್ರಭಾವಿಸುತ್ತದೆ. ಒಂದು ಸಂದರ್ಭದಲ್ಲಿ ನಡೆಯುವ ಹಿಂಸೆ ಅಥವಾ ಅಭಿವ್ಯಕ್ತಿಯ ದಮನಗಳು ಮತ್ತೊಂದು ಪ್ರದೇಶದ ಜನರಲ್ಲೂ ನೈತಿಕ ಆತಂಕವನ್ನು ಹುಟ್ಟಿಸುವ ಮೂಲಕ ಇತರ ಪ್ರದೇಶಗಳ ಜನರನ್ನೂ ಪ್ರಭಾವಿಸುತ್ತದೆ. ಇದು ಬೇರೆ ಪ್ರದೇಶಗಳ ಜನರಲ್ಲಿ ಹುಟ್ಟುವ ಆತಂಕ ಮತ್ತು ಅನುಮಾನಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುತ್ತದೆ. ಇದರಿಂದಾಗಿ ಹಾಲಿ ಸರ್ಕಾರ ಮತ್ತು ಸಂಪ್ರದಾಯಶೀಲ ಶಕ್ತಿಗಳು ಸ್ವಾತಂತ್ರ್ಯದ ಸಾಮಾಜಿಕ ಅವಕಾಶಗಳನ್ನು ಕಿರಿದುಗೊಳಿಸಲು ಇನ್ನೂ ಏನೇನು ಕ್ರಮಗಳನ್ನು ತೆಗೆದುಕೊಳ್ಳುತ್ತಾರೋ ಎಂದು ಜನರು ಆತಂಕ ಹಾಗೂ ಅನುಮಾನಗಳಿಂದ ನರಳುತ್ತಾರೆ. ಇಂಥಾ ನೈತಿಕ ಆತಂಕಗಳ ಪರಿಸ್ಥಿತಿಯನ್ನು ಹೋಗಲಾಡಿಸಲು ಸರ್ಕಾರಿ ಸಂಸ್ಥೆಗಳು ವಿಫಲವಾಗುತ್ತಿರುವುದು ಮತದಾನಕ್ಕಿರುವ ಸೀಮಿತ ಶಕ್ತಿಯನ್ನು ಬಯಲು ಮಾಡುತ್ತದೆಮತಶಕ್ತಿಯು ತನ್ನಂತೆ ತಾನೇ ಶಕ್ತಿಯ ಸರಿತನವನ್ನೇನೂ ಸಾಬೀತುಮಾಡುವುದಿಲ್ಲ.

ಮತಶಕ್ತಿಯು ಸಾಲುವುದಿಲ್ಲ: ಒಮ್ಮೊಮ್ಮೆ ಮತಶಕ್ತಿಯು ಸಂಪ್ರದಾಯಿಕ ಶಕ್ತಿಗಳ ಬೆಂಬಲಕ್ಕೆ ಪೂರಕವಾಗಿಬಿಡಬಹುದು. ಗಣರಾಜ್ಯ ವ್ಯವಸ್ಥೆಯ ಮಾದರಿಗಳಲ್ಲಿ ಜನಶಕ್ತಿಯನ್ನು ನೈತಿಕ ಅಧಿಕಾರದ ಶಕ್ತಿಗಳು ನಿಯಂತ್ರಿಸುತ್ತವೆ ಅಥವಾ ಸೀಮಿತಗೊಳಿಸುತ್ತವೆ. ಹೀಗಾಗಿ ಹಿಂಸೆಯನ್ನು ನಿರಾಕರಿಸುವ ಸಾಮರ್ಥ್ಯವನ್ನು ಬೆಳೆಸುವಷ್ಟು ಮಟ್ಟಿಗೆ ಮತದಾರರ ನೈತಿಕ ಶಕ್ತಿಯು ಬೆಳೆಯುವುದು ಅಗತ್ಯ. ನೈತಿಕ ಅಧಿಕಾರವೇ ಸರಿತನದ ಚೌಕಟ್ಟಿಗೆ ಮತದಾನದ ಅಧಿಕಾರವನ್ನು ಒಳಪಡಿಸುತ್ತದೆ. ಮೂಲಭೂತ ಸ್ವಾತಂತ್ರ್ಯ ಮತ್ತು ಅಹಿಂಸೆಗಳು ಚೌಕಟ್ಟಿನ ಪ್ರಧಾನ ಮಾನದಂಡಗಳು. ಕೇಳಬೇಕಿರುವ ಪ್ರಶ್ನೆಯೇನೆಂದರೆ: ಜನರ ಮತನಿರ್ಣಯಗ ಮೇಲೆ ನೈತಿಕ ಶಕ್ತಿಯು ಎಷ್ಟರಮಟ್ಟಿಗಿನ ನಿರ್ಣಾಯಕ ಪ್ರಭಾವವನ್ನು ಹೊಂದಿದೆ.? ದುರದೃಷ್ಟವಶಾತ್ ಜನರ ಮುಂದೆ ನಡೆಯುವ ಹಿಂಸೆಗಳು ಮತ್ತು ಅದನ್ನು ಮೂಕಪ್ರೇಕ್ಷಕರಾಗಿ ನೋಡುವಂತೆ ಅವರ ಮೆದುಳಿನ ಮೇಲೆ ಆಗಿರುವ ಪ್ರಭಾವಗಳನ್ನು ನೋಡಿದರೆ ಪ್ರಶ್ನೆಗೆ ಸಕಾರಾತ್ಮಕ  ಉತ್ತರವೇನೂ ಸಿಗುವುದಿಲ್ಲ. ಜನರು ತಮ್ಮ ನೈತಿಕ ಅಧಿಕಾರವನ್ನು ಚಲಾಯಿಸಲು ವಿಫಲರಾಗಿರುವ ಸನ್ನಿವೇಶದಲ್ಲಿ, ಸಮಾಜದ ಯಾವುದಾದರೂ ಜನವರ್ಗ ಅಥವಾ ಪ್ರಭುತ್ವ ತಮ್ಮ ನೈತಿಕ ಹಾಗೂ ಸಾಂವಿಧಾನಿಕ ಮಿತಿಯನ್ನು ದಾಟಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಿಂಸೆಯಲ್ಲಿ ತೊಡಗಿಕೊಂಡಾಗ  ಅದನ್ನು ತಡೆಗಟ್ಟಲು ಮಧ್ಯಪ್ರವೇಶ ಮಾಡುವ ಅಧಿಕಾರವನ್ನು ಯಾರಾದರೊಬ್ಬರಿಗೆ ನೀಡಲೇ ಬೇಕಾಗುತ್ತದೆ. ಹಿನ್ನೆಲೆಯಲ್ಲಿ ಸತ್ಯಾಂಶವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ರ್ಯಾಡಿಕಲ್  ಶಕ್ತಿಗಳು ತೊಡಗಿಕೊಳ್ಳುವ ಸತ್ಯಶೋಧನಾ ಕಾರ್ಯಚಟುವಟಿಕೆಗಳು ಅರ್ಥವಾಗುವಂತದ್ದೇ ಆಗಿದೆ.

ಕುತೂಹಲದಾಯಕ ವಿಚಾರವೆಂದರೆ ರ್ಯಾಡಿಕಲ್ ಶಕ್ತಿಗಳು ಇಂಥಾ ಸಂದರ್ಭದಲ್ಲಿ ಮಧ್ಯಪ್ರವೆಶ ಮಾಡಿದರೂ ಜನರನ್ನು  ತಲುಪುವುದಕ್ಕಿಂತ ಜಾಸ್ತಿ ಪ್ರಭುತ್ವದೊಡನೆ ಕದನಕ್ಕಿಳಿಯುತ್ತಾರೆ. ಅವರಲ್ಲಿ ಕೆಲವರು ಜನರ ಜೊತೆಗೂ ಸಂವಾದ ನಡೆಸುತ್ತಾರೆ. ಆದರೆ ಹಿಂಸೆಯನ್ನು ನಿರಾಕರಿಸಲು ಸಮಾಜದ ಕೆಲಶಕ್ತಿಗಳು ತಮ್ಮ ನೈತಿಕ ಶಕ್ತಿಯನ್ನು ಬಳಸಲು ವಿಫಲರಾಗುತ್ತಾರಾದ್ದರಿಂದ ರ್ಯಾಡಿಕಲ್ ಶಕ್ತಿಗಳು ನಿರಂತರವಾಗಿ ಮಧ್ಯಪ್ರವೇಶ ಮಾಡುತ್ತಲೇ ಇರಬೇಕಾಗುತ್ತದೆ. ಅವರು ವಿಷಯಗಳನ್ನು ಸತತವಾಗಿ ಪ್ರಭುತ್ವದ ಗಮನಕ್ಕೆ ತರುತ್ತಲೇ ಇರುತ್ತಾರೆ ಮತ್ತು ಪ್ರಭುತ್ವವು ಮಾತ್ರ  ನಿರಂತರವಾಗಿ ಅವರನ್ನು ನಿರ್ಲಕ್ಷಿಸುತ್ತಲೇ ಹೋಗುತ್ತದೆ. ಹೀಗಾಗಿ ಒಟ್ಟು ವಿದ್ಯಮಾನವೇ ತೀವ್ರಗಾಮಿಗಳು ಮತ್ತು ಸಂಪ್ರದಾಯಶಕ್ತಿಗಳ ನಡುವೆ ನಡೆಯುವ ಏರಿಳಿ ಆಟದಂತೆ ಭಾಸವಾಗಲು ಶುರುವಾಗುತ್ತದೆ. ಹಾಗೂ ಸದಾ ಪ್ರತಿಕ್ರಿಯಾತ್ಮಕವಾಗಿರುವ ರ್ಯಾಡಿಕಲ್ ಚಟುವಟಿಕೆಗಳ ಮಾದರಿಗಳಿಂದಾಗಿ ಅವರು ಸಂಪ್ರದಾಯವಾದಿಗಳೇ ರಚಿಸಿರುವ ಹುನ್ನಾರದಲ್ಲಿ ಸಿಲುಕಿಕೊಳ್ಳುತ್ತಾರೆ . ಆಗ ಸಂಪ್ರದಾಯವಾದಿಗಳು  ಬಹಳ ಬೇಗ ಅವರನ್ನು ಅದರ ವಿರೋಧಿ , ಇದರ ವಿರೋಧಿ ಎಂದು ಪಟ್ಟಿ ಕಟ್ಟತೊಡಗುತ್ತಾರೆ.

ಈಗ ಮುಖ್ಯವಾಗಿರುವುದು ಸಮೂಹ ಹಿಂಸಾಚಾರವನ್ನು ಪ್ರಜ್ನಾಪೂರ್ವಕವಾಗಿ ನಿರಾಕರಿಸುವ ನೈತಿಕ ಶಕ್ತಿಯ ಸರಿತನದ ಪ್ರಾಮುಖ್ಯತೆಯನ್ನು ಗುರುತಿಸುವ ಒಪ್ಪಂದ. ಆದರೆ ರ್ಯಾಡಿಕಲ್ಗಳು ಮತ್ತು ವಿವಿಧ ರೀತಿಯ ಸಂಪ್ರದಾಯವಾದಿಗಳು ಪರಸ್ಪರ ಮುಖವನ್ನು ನೋಡಲಾಗದಷ್ಟು ದೂರವಾಗಿದ್ದಾರೆ. ಸಮಾಜದ ದುರ್ಬಲ ವರ್ಗಗಳ ಮೇಲೆ ಹಿಂಸಾಚರ ನಡೆಸಬಾರದೆಂಬ ಅಥವಾ ಗುಂಪುದಾಳಿಗಳ ಬಗ್ಗೆ ಸಾರ್ವತ್ರಿಕ ನಿರಾಕರಣೆಯನ್ನು ಹುಟ್ಟುಹಾಕಬೇಕೆಂಬ ಗುರಿಗಳ ಬದಲಿಗೆ  ಪರಸ್ಪರರ ದೂರೀಕರಣಗಳು ವ್ಯವಸ್ಥಿತವಾಗಿ ನಡೆಯುತ್ತಲಿವೆ ಎಂಬುದಂತೂ ಸ್ಪಷ್ಟ. ಹಿಂಸೆಯ ನಿರಾಕರಣೆಯೆಂಬುದು ತುರ್ತಾಗಿ ಮತ್ತು ದಿನನಿತ್ಯ ನಡೆಯಬೇಕಿರುವ ಸಂಗತಿಯಾಗಿದ್ದು ಮತದಾನದ ತನಕ ಮುಂದಕ್ಕೆ ಹಾಕಲಾಗುವುದಿಲ್ಲ. ಅದನ್ನೂ ತುಂಬಾ ಮುಂದೂಡಿದರೆ ಜಾಗವನ್ನು ಸಂಪ್ರದಾಯವಾದಿಗಳು ಭರ್ತಿ ಮಾಡಲು ಸಾಕಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಹೀಗೆ ಅನುಮಾನ ಮತ್ತು ಅನಿಶ್ಚತತೆಗಳಿಗೆ ಸಾಕಷ್ಟು ಅವಕಾಶವಿರುವ ಸಂದರ್ಭದಲ್ಲಿ ಸತ್ಯವನ್ನು ಮುಚ್ಚಿ ಹಾಕುವ ಸಲುವಾಗಿ ತೀವ್ರವಾದ ಟ್ರೋಲಿಂಗ್ ಮಾಡುವ ಮೂಲಕ ಚಿಂತನೆಯನ್ನು ಹತ್ತಿಕ್ಕುವ ಪೊಲೀಸರು ಸತ್ಯದ ಕಥನವನ್ನು ದಮನ ಮಾಡುತ್ತಾರೆ. ಹೀಗಾಗಿ ಬಹುಪಕ್ಷೀಯ ಒಪ್ಪಂದವೊಂದಕ್ಕೆ ಬರಬೇಕೆಂದರೆ ನೈಜತೆಯ ಸಹಜಸದೃಶ ವಿವರಣೆಯನ್ನು ನೀಡಬೇಕಾಗುತ್ತದೆ. ಅಂಥಾ ಒಂದು ಕಥನವನ್ನು ಒಂದು ನಿರ್ದಿಷ್ಟ ಹಿಂಸಾತ್ಮಕ ಪ್ರಕರಣದ ಪರಿಣಾಮವಾಗಿ ಹೇಗೆ ಅಹಿಂಸೆಯೆಂಬ ಒಂದು ಸಾರ್ವತ್ರಿಕ ಒಳಿತಿಗಾಗಿನ ಚಟುವಟಿಕೆಗಳನ್ನು ಹುಟ್ಟುಹಾಕುತ್ತದೆಂಬ ವಿವರಣೆಯಿಂದ ಪ್ರಾರಂಭಿಸಬಹುದು. ನಿರಂತರ ಹಿಂಸೆಯಿಂದಲೇ ಆಡಳಿತವನ್ನು ನಡೆಸಬೇಕೆಂದು ಬಯಸುವ ರಾಜಕೀಯ ಶಕ್ತಿಗಳಿಂದ ಜಗತ್ತಿನ ಯಾವ ಸಮಾಜವು ಸಾಮಾಜಿಕ ಪ್ರಗತಿಯನ್ನು ಕಾಣಲು ಸಾಧ್ಯವಾಗಿಲ್ಲ.  

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...