ಮುಂಡಗೋಡ: ತಹಶೀಲ್ದಾರ ಕಚೇರಿಯ ತನಕಾ ಬೀಡ್ರಿ ಪಾ ನನ್ನದು ಸ್ವಲ್ಪ ಕೆಲಸ ಐತಿ ನಿಮಗ ಪುಣ್ಯಾ ಬರತೈತಿ ಎಂದು ಸುಮಾರು 70-75 ವಯಸ್ಸು ಅಸುಪಾಸಿನ ವೃದ್ದೆಯೊಬ್ಬಳು ಹುಬ್ಬಳ್ಳಿ- ಶಿರಸಿ ರಸ್ತೆಯಲ್ಲಿ ಮಿನಿವಿಧಾನಸೌಧ ದಿಕ್ಕಿಗೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಕೈಮಾಡಿ ಅಂಗಲಾಚಿಸುತ್ತಾ ಬೇಡಿಕೊಂಡರು ಯಾರೂ ಸಹ ಆ ವೃದ್ದೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಎಲ್ಲಿ ಆ ವೃದ್ದೆಗೆ ಸೋಂಕು ಇದಿಯೋ ಎನೋ ಎಂದು ಹೆದರಿಕೆಯಿಂದ ಕೆಲವರು ಸಹಾಯ ಮಾಡಲು ಮನಸ್ಸು ಮಾಡಲಿಲ್ಲ. ಕಾರ್ಯನಿಮಿತ್ತ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮುಂಡಗೋಡ ಠಾಣಾ ಪಿಎಸ್ಐ ಬಸವರಾಜ ಮಬನೂರ ವೃದ್ದೆಯು ಅಂಗಲಾಚುತ್ತಿದ್ದ ದೃಶ್ಯವನ್ನು ನೋಡಿ ಮನಕರಗಿ ತಮ್ಮ ವಾಹನವನ್ನು ನಿಲ್ಲಿಸಿ ಆ ವೃದ್ಧೆಗೆ ತಮ್ಮ ವಾಹನದಲ್ಲಿ ಕುಳ್ಳರಿಸಿ ತಹಶೀಲ್ದಾರ ಕಚೇರಿಗೆ ಬಿಟ್ಟು ಬಂದು ತಮ್ಮ ಹೃದಯವಂತಿಕೆಯನ್ನು ಮರೆದಿದ್ದಾರೆ. ಪಿಎಸ್ಐ ಮಬನೂರ ರವರು ಇಂತಹ ಪುಣ್ಯದ ಕೆಲಸ ಮಾಡುತ್ತಿರುವುದು ಹೊಸದೇನಲ್ಲಾ ಲಾಕ್ಡೌನ್ ಸಂದರ್ಭದಲ್ಲಿ ಗೋ ಶಾಲೆಗೆ ಹೋಗಿ ಅಲ್ಲಿಯ ತಮ್ಮ ಹಣದಿಂದ ಮೇವು ಖರೀದಿಸಿ ದನಕರುಗಳಿಗೆ ಮೇವು ತಿನ್ನಸಿದ್ದರು. ಮೊನ್ನೆ ಅಪ್ರಾಪ್ತ ಬಾಲಕಿಯೊಬ್ಬಳು ಮನೆ ಬಿಟ್ಟು ಬಂದಾಗ ಅವಳನ್ನು sಸಂತೈಸಿ ಅವರ ಪಾಲಕರಿಗೆ ಒಪ್ಪಿಸಿದ್ದರು.
Read These Next
ರೈಲಿನಡಿ ಆತ್ಮಹತ್ಯೆ ಮಾಡಿಕೊಂಡ ಅಪರಿಚಿತ ವ್ಯಕ್ತಿ
ಭಟ್ಕಳ: ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತೆರ್ನಮಕ್ಕಿಯಲ್ಲಿ ...
ಭಟ್ಕಳದ ಶಮ್ಸುದ್ಧೀನ್ ವೃತ್ತದ ಬಳಿ ರಸ್ತೆ ಅಪಘಾತ; ಆಟೋ ರಿಕ್ಷಾ ಚಾಲಕ ಗಂಭೀರ
ಭಟ್ಕಳ: ಭಟ್ಕಳದ ಹೃದಯಭಾಗವಾಗಿರುವ ಶಂಶುದ್ದೀನ್ ವೃತ್ತದ ಬಳಿ ಖಾಸಗಿ ಬಸ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಆಟೋ ಚಾಲಕ ಗಂಭೀರವಾಗಿ ...
ಹೊನ್ನಾವರ: ಕಾಸರಕೋಡು ಬಂದರು ನಿರ್ಮಾಣಕ್ಕೆ ಸಹಕರಿಸಿ : ಜಿಲ್ಲಾಧಿಕಾರಿ
ಕಾಸರಕೋಡುನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಂದರು ಕಾಮಗಾರಿಗೆ ಅಗತ್ಯವಿರುವ ಸರ್ವೇ ಕಾರ್ಯವನ್ನು ಈ ತಿಂಗಳಲ್ಲಿ ...
ಜಿಲ್ಲೆಯಲ್ಲಿ ಗರಿಷ್ಠ ಮತದಾನದ ಉದ್ದೇಶ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಜಿಲ್ಲೆಯಲ್ಲಿ ಗರಿಷ್ಠ ಮತದಾನದ ಉದ್ದೇಶ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಭಟ್ಕಳದ ತಂಝೀಮ್ ವತಿಯಿಂದ ಮಾರ್ಚ್ 30 ಮತ್ತು 31 ರಂದು ಮೆಗಾ ವೋಟರ್ ಐಡಿ ಶಿಬಿರ
ಭಟ್ಕಳ: ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅರ್ಹ ಮತದಾರರನ್ನು ನೋಂದಾಯಿಸಲು ಮತ್ತು ಮತದಾರರ ಗುರುತಿನ ಚೀಟಿ ನೀಡಲು ಭಟ್ಕಳದ ...