ಮುರ್ಡೇಶ್ವರ: ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಈಜುತ್ತಿದ್ದ ಮೂವರು ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ.
ಅರ್ಜುನ್ (25), ಉಮೇಶ್ (22), ಸೂರ್ಯ (20) ರಕ್ಷಣೆಗೊಳಗಾದ ಪ್ರವಾಸಿಗರು. 13 ಜನ ಸ್ನೇಹಿತರು ಶಿವಮೊಗ್ಗ ಜಿಲ್ಲೆಯ ಶಿಖಾರಿಪುರದಿಂದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು.
ಬೀಚ್ ಸುಪರವೈಜರ್ ದತ್ತಾತ್ರೇಯ ಶೆಟ್ಟಿ, ಟೂರಿಸ್ಟ್ ಮಿತ್ರ ಸುಧಾಕರ, ಲೈಪ್ ಗಾರ್ಡ್ ಗಳಾದ ಕೇಶವ, ಹನುಮಂತ, ವಿಘ್ನೇಶ್ವರ, ರಾಮಚಂದ್ರ, ಜಯರಾಮ ಅವರು ರಕ್ಷಣೆ ಮಾಡಿದವರಾಗಿದ್ದಾರೆ.