ಮುರ್ಡೇಶ್ವರ ಸಮುದ್ರದಲ್ಲಿ ಬೆಂಗಳೂರಿನ ಮೂವರ ರಕ್ಷಣೆ

Source: SO News | By Laxmi Tanaya | Published on 28th February 2021, 11:35 AM | Coastal News |

ಭಟ್ಕಳ :  ಈಜಲು ತೆರಳಿದ ಮೂವರು ಅಪಾಯಕ್ಕೆ ಸಿಲುಕಿದಾಗ ಮೂವರನ್ನ ರಕ್ಷಿಸಿದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ.

ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.  ಬೆಂಗಳೂರಿನ ಕತ್ರಿಗುಪ್ಪೆಯ  ಸಂಜನ (೧೫), ಸಂಜಯ್ (೧೮) ಹಾಗೂ ಕಮಲಮ್ಮ (೪೦) ರಕ್ಷಣೆಗೊಳಗಾದವರಾಗಿದ್ದಾರೆ.  ಒಂದೇ ಕುಟುಂಬದ ಐವರು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ  ಕಡಲತೀರ ಕಂಡು ಸಮುದ್ರದಲ್ಲಿ ಈಜಲು ಇಳಿದಿದ್ದಾರೆ. ಈಜುತ್ತಾ ಈಜುತ್ತಾ  ಮುಂದೆ ಹೋಗಿದ್ದ  ಮೂವರು ಅಪಾಯಕ್ಕೆ ಸಿಲುಕಿದ್ದರು ಎನ್ನಲಾಗಿದೆ.

ಅಲ್ಲಿಯೇ ಇದ್ದ ಲೈಪ್ ಗಾರ್ಡ್ ಸಿಬ್ಬಂದಿಗಳಾದ ಸಂಜೀವ್ ಹರಿಕಾಂತ್, ಚಂದ್ರಶೇಖರ್ ದೇವಾಡಿಗ್ ಎಂಬುವವರು ಸಮುದ್ರಕ್ಕೆ ಧುಮುಕಿ ಮೂವರನ್ನ  ರಕ್ಷಿಸಿ ಕರೆ ತಂದಿದ್ದಾರೆ. 

ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...