ಹೊಸದಿಲ್ಲಿ: ರಾಜಕೀಯ ಬಿರುಗಾಳಿಯ ಕೇಂದ್ರ ಬಿಂದುವಾಗಿರುವ ಎಲ್ಲ ಮೂರು ಕೃಷಿ ವಿಧೇಯಕಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಅಂಕಿತ ಹಾಕಿದರು.
ಕಳೆದ ವಾರ ವಿಪಕ್ಷಗಳ ಕೋಲಾಹಲದ ನಡುವೆ ಎರಡು ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕೃತವಾಗಿದ್ದವು. ವಿಧೇಯಕಗಳಿಗೆ ಅಂಕಿತ ಹಾಕದೇ ಸಂಸತ್ತಿನ ಮರು ಪರಿಶೀಲನೆಗೆ ಅದನ್ನು ವಾಪಸ್ ಕಳುಹಿಸಿ ಎಂದು ಗುಲಾಂ ನಬಿ ಆಝಾದ್ ನೇತೃತ್ವದಲ್ಲಿ ರಾಷ್ಟ್ರಪತಿಭವನಕ್ಕೆ ತೆರಳಿದ್ದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ವಿನಂತಿಸಿದ್ದವು.
ಜೂನ್ ನಲ್ಲಿ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಈಗ ಮಸೂದೆಯಾಗಿ ಪರಿವರ್ತಿತವಾಗಿದ್ದು, ರೈತರಲ್ಲಿ ಈ ಮಸೂದೆ ಆತಂಕ ಮೂಡಿಸಿದೆ. ಇದು ರೈತರ ವಿರೋಧಿ ಎಂದು ದೂಷಿಸಲಾಗುತ್ತಿದೆ.ಈ ವಾರಾರಂಭದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಜಮಾಯಿಸಿರುವ ರೈತರು ಮಸೂದೆಗಳನ್ನು ವಿರೋಧಿಸಿದ್ದರು. ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ರೃತರ ಪ್ರತಿಭಟನೆಯ ಕಾವು ಜೋರಾಗಿದೆ.