ಭಟ್ಕಳ:ಕಾಂಗ್ರೆಸ್ ಪಕ್ಷ ಗಾಂಧೀ ಹೆಸರಿನಲ್ಲಿ ಸೋಗಲಾಡಿತನ ರಾಜಕೀಯ ಮಾಡುತ್ತಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಭಟ್ಕಳದಲ್ಲಿ ಶುಕ್ರವಾರ ನಡೆದ 'ಗಾಂಧಿ ಸಂಕಲ್ಪ'ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಿಜೆಪಿ ಗಾಂಧೀಜಿಯವರ ಜಾತ್ಯಾತೀತದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಅದರಂತೆ ನಡೆದುಕೊಳ್ಳುತ್ತಿದೆ ಎಂದರು.ಶಾಸಕ ಸುನೀಲ್ ನಾಯ್ಕ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿಯವರ 'ಸ್ವಚ್ಚ ಭಾರತ'ಕನಸನ್ನು ನನಸು ಮಾಡಲು ಅದನ್ನು ಅನುಷ್ಠಾನ ಮಾಡಿದ್ದಾರೆ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ನಾಯ್ಕ,ಪ್ರಮುಖರಾದ ಕೃಷ್ಣ ನಾಯ್ಕ ಆಸರಕೇರಿ,ಗೋವಿಂದ ನಾಯ್ಕ,ಶಿವಾನಿ ಶಾಂತಾರಾಮ,ಕೇದಾರ ಕೊಲ್ಲೆ,ಕಾಸ್ಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕ,ಈಶ್ವರ ದೊಡ್ಮನೆ,ದಿನೇಶ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.ಸುಬ್ರಾಯ ದೇವಾಡಿಗ ಸ್ವಾಗತಿಸಿ,ವಂದಿಸಿದರು.
ಶಾಸಕ ಸುನೀಲ್ ನಾಯ್ಕ ನೇತೃತ್ವದಲ್ಲಿ ಮುರ್ಡೇಶ್ವರ ಸರ್ಕಾರಿ ಆಸ್ಪತ್ರೆಯಿದ ದೇವಸ್ಥಾನದವರೆಗೆ ನಡೆದ ಸಂಕಲ್ಪ ಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.ಮಳೆಯ ಕಾರಣ ಭಟ್ಕಳದಲ್ಲಿ ಯಾತ್ರೆಯನ್ನು ರದ್ದು ಮಾಡಲಾಗಿತ್ತು.