by M.R.Manvi
ಮೋಸ, ವಂಚನೆ, ಕಪಟ, ದಗಲಬಾಜಿ, ಅರಾಜಕತೆ ಗೆ ಮತ್ತೊಂದು ಅರ್ಥವೇ ರಾಜಕೀಯ. ಇದು ಎಲ್ಲಿ ಬೇಕಾದರೂ ಸುಲಭವಾಗಿ ನುಸುಳುವಂತಹದ್ದು. ಮನೆ, ಕಚೇರಿ, ಠಾಣೆ, ಮಂದಿರ, ಮಸೀದಿ, ಚರ್ಚು, ಗುರುದ್ವಾರ ಇದಕ್ಕೆ ಇಂತಹದ್ದೇ ಎನ್ನುವ ಒಂದು ನಿದಿರ್ಷ್ಠ ಸ್ಥಳವಿಲ್ಲ. ಎಲ್ಲಿಬೇಕಲ್ಲಿ ಲೀಲಾಜಾಲವಾಗಿ ತನ್ನ ವರ್ಚಸ್ಸನ್ನು ಕುದುರಿಸಿಕೊಳ್ಳುವ ಶಕ್ತಿ ಈ ರಾಜಕೀಯಕ್ಕೆ ಇದೆ. ಇದು ತನ್ನ ಬೇಳೆ ಬೇಯಿಸಿಕೊಳ್ಳಲು ಏನುಬೇಕಾದರೂ ಮಾಡಬಲ್ಲದು. ಕತ್ತೆಯ ಕಾಲು ಹಿಡಿದರೂ ಪರವಾಗಿಲ್ಲ. ಸಮಯ ಬಂದಾಗ ಅದು ತನ್ನೆಲ್ಲ ಮೇರೆಗಳನ್ನು ಮೀರಿ ಬದುಕಿಕೊಳ್ಳುವ ಕರಾಮತ್ತು ಹೊಂದಿದೆ.
ಸಾಮಾನ್ಯವಾಗಿ ರಾಜಕೀಯ ಮಂದಿ ತಮ್ಮ ಕೈಯಿಂದ ಒಂದು ಚಿಕ್ಕ ಅವಕಾಶವನ್ನು ಹೋಗಲು ಬಿಡಲ್ಲ. ಮದುವೆ ಸಮಾರಂಭವಾಗಲಿ, ಹುಟ್ಟು, ಸಾವು, ಯಾವುದೇ ಸಂದರ್ಭವಿರಲಿ ತಮ್ಮ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಅದನ್ನು ಬಳಸಿಕೊಳ್ಳುವುದುಂಟು. ಇದಕ್ಕಾಗಿ ಜಾತಿ, ಧರ್ಮ, ಪಕ್ಷ, ಭಾಷೆ ಇದಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಿಕ್ಕ ಸಂದರ್ಭವನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಇದನ್ನು ನಾವು ದಿನ ದಿನ್ಯತ ವಿದ್ಯಾಮಾನಗಳಲ್ಲಿ ಕಾಣಬಹುದು ಕೂಡ.
ಸಂದರ್ಭ ಮತ್ತು ಅವಕಾಶಕ್ಕಾಗಿ ಕಾಯುತ್ತಿರುವ ರಾಜಕೀಯ ಪಕ್ಷದ ಧುರಿಣರು ರಮಝಾನ್ ಮಾಸದ ಸಂದರ್ಭದಲ್ಲಿ ಇಫ್ತಾರ್ ಕೂಟಗಳನ್ನು ಏರ್ಪಡಿಸುವುದರ ಮೂಲಕ ನಾವು ನಿಮ್ಮ ಜತೆಗಿದ್ದೇವೆ ಎಂದು ಮುಸ್ಲಿಮ್ ಸಮುದಾಯವನ್ನು ನಂಬಿಸುವ, ಅವರನ್ನು ಮೂರ್ಖರನ್ನಾಗಿಸುವ ಕಾರ್ಯತಂತ್ರವನ್ನು ರೂಪಿಸಿಕೊಂಡಿದ್ದು.
ಇಂದು ದೇಶದಾದ್ಯಂತ ಭರ್ಜರಿಯಾಗಿ ಇಫ್ತಾರ್ ಕೂಟಗಳು ಆಯೋಜನೆಗೊಳ್ಳುತ್ತಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಕಟ್ಟಾ ಮುಸ್ಲಿಮ್ ವಿರೋಧಿಯಾಗಿರುವ ಸಂಘಪರಿವಾರದ ರಾಜಕೀಯ ಪಕ್ಷ ಬಿಜೆಪಿ ಮತ್ತು ಸ್ವತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕೂಡ ಹಿಂದೆ ಬಿದ್ದಿಲ್ಲ ಎನ್ನಬಹುದು.
ರಮಝಾನ್ ಮಾಸವು ವಿಶ್ವದ ಮುಸ್ಲಿಮರಿಗಾಗಿ ಪವಿತ್ರವೂ ಅತ್ಯಂತ ಮಹತ್ವವುಳ್ಳದ್ದು ಎನ್ನುವುದರಲ್ಲಿ ಎರಡುಮಾತಿಲ್ಲ. ರಮಝಾನ ಮಾಸಪೂರ್ತಿ ದಾನಧರ್ಮ, ಪುಣ್ಯಕಾರ್ಯಗಳಲ್ಲಿ ನಿರತ ಅದೆಷ್ಟೋ ಮಂದಿ ತಮ್ಮಲ್ಲಿರುವ ಸರ್ವಸ್ವವನ್ನು ದೇವನ ಸನ್ನಿಧಿಗೆ ಅರ್ಪಿಸಲು ಸಿದ್ದರಿರುತ್ತಾರೆ. ದಿನಪೂರ್ತಿ ಉಪವಾಸ ಆಚರಿಸಿ ಸೂರ್ಯಸ್ಥಗೊಳ್ಳುತ್ತಲೆ ಉಪವಾಸ ಬಿಡುವ ಕ್ರಮಕ್ಕೆ ಇಸ್ಲಾಮಿ ಪರಿಭಾಷೆಯಲ್ಲಿ ‘ಇಫ್ತಾರ್’ ಎನ್ನಲಾಗುತ್ತದೆ, ಅಲ್ಲಲ್ಲಿ ಕೆಲ ಮುಸ್ಲಿಮ್ ಸಂಘಟನೆಗಳನ್ನು ಮಸೀದಿ ಜಮಾಅತ್ ಗಳು ಇದನ್ನು ಹಿಂದು ಮುಸ್ಲಿಂ ರ ಸೌಹಾರ್ಧದ ಸಂಕೇತವನ್ನಾಗಿ ಬಳಸಿಕೊಂಡು ಎಲ್ಲ ಧರ್ಮ, ಜಾತಿ, ಸಮುದಾಯವನ್ನು ಒಂದು ವೇದಿಕೆಗೆ ತರವ ಪ್ರಯತ್ನವಾಗಿ ‘ಇಫ್ತಾರ್ ಸೌಹಾರ್ಧ ಕೂಟ’ ವನ್ನು ಆಯೋಜಿಸಿ ಉಪವಾಸದ ಮಹತ್ವ, ಅದು ಹೇಗೆ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುತ್ತದೆ, ಉಪವಾಸದಿಂದಾಗಿ ಯಾವೆಲ್ಲ ಮಾನವೀಯ ಗುಣಗಳು ಮೈಗೂಡಿಸಿಕೊಳ್ಳಬಹುದು ಎಂಬುದರ ಕುರಿತಂತೆ ಉಪನ್ಯಾಸ ನೀಡಲಾಗುತ್ತದೆ. ಹಾಗೆಯೆ ಎಲ್ಲ ಧರ್ಮದವರನ್ನು ಒಟ್ಟು ಸೇರಿಸಿ ಮನುಜಕುಲ ಒಂದೇ ಎಂಬ ಸಂದೇಶವನ್ನು ನೀಡಲಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ಪರಸ್ಪರ ಶಾಂತಿ, ಸೌಹಾರ್ಧ, ಸಾಮರಸ್ಯ, ಬ್ರಾತೃತ್ವ ಉಂಟಾಗಿ ಸಮಾಜದ ಅಭಿವೃದ್ಧಿಯಾಗುವ ನಿರೀಕ್ಷೆಯೊಂದಿಗೆ ಆಯೋಜಿಸಲಾಗುತ್ತದೆ.
ಮುಸ್ಲಿಮರ ಮತವನ್ನು ನಗದೀಕರಣಗೊಳಿಸಿಕೊಳ್ಳುವಲ್ಲಿ ಒಂದಿಂಚು ಅವಕಾಶಗಳನ್ನು ಬಿಡದ ರಾಜಕೀಯ ಪಕ್ಷದ ನೇತಾರರು ರಮಝಾನ್ ತಿಂಗಳನ್ನು ಅತ್ಯಂತ ಚಾಣಾಕ್ಷತನದಿಂದ ಉಪಯೋಗಿಸಿಕೊಳ್ಳುತ್ತಾರೆ. ಕಾಂಗ್ರೇಸ್, ಬಿಜೆಪಿಗಳಂತಹ ರಾಷ್ಟ್ರೀಯ ಪಕ್ಷಗಳ ಇಫ್ತಾರ್ ರಾಜಕಾರಣ ಒಂದೆಡೆಯಾದರೆ ಪ್ರಾದೇಶಿಕ ಹಾಗೂ ಪುಡಿ ರಾಜಕಾರಣಿಗಳು ಇಫ್ತಾರ್ ರಾಜಕಾರಣ ಮತ್ತೊಂದೆಡೆ. ಇಫ್ತಾರ್ ಕೂಟದ ಹೆಸರಲ್ಲಿ ರಾಜಕೀಯ ಪಕ್ಷದ ನೇತಾರರು ನಡೆಸುವ ಇಫ್ತಾರ್ ಕೂಟಗಳು ಭರ್ಜರಿ ಮಾಂಸದೂಟದ ಔತಣಕೂಟಗಳಾಗಿ ಮಾರ್ಪಟ್ಟಿರುತ್ತವೆ. ಇದರಲ್ಲಿ ಬಡಪಾಯಿ ಉಪವಾಸಿಗನ ಶೂನ್ಯ ಎಂದೇ ಹೇಳಬಹುದು. ಕಂಠಪೂರ್ತಿ ಕುಡಿದು ಭೋರಿ ಭೋಜನ ಮಾಡಲು ಬರುವವರೇ ಅಧಿಕ. ತಿಂಗಳಪೂರ್ತಿ ಕೆಲ ಮಂದಿ ಇಂತಹ ಬಿಟ್ಟಿ ಊಟಕ್ಕಾಗಿಯೆ ಕಾಯ್ದು ಕುಳಿತಿರುತ್ತಾರೆ. ಕಾರ್ಯಕರ್ತರ ದಂಡು, ನೇತಾರರ ಅಭಿಮಾನಿಗಳ ಬಳಗ, ಮರುದಿನ ಪತ್ರಿಕೆಗಳಲ್ಲಿ ‘ಟೋಪಿಹಾಕಿಕೊಂಡು ರಾರಾಜಿಸುತ್ತಿರುವ ನೇತಾರರ ಫೋಟೊ. ಇಷ್ಟಾದರೆ ಸಾಕು ಇಫ್ತಾರ್ ಕೂಟ ಮುಗಿದಂತೆಯೆ. ಕೆಲವು ನೇತಾರರ ಮೊಸಳೆ ಕಣ್ಣೀರು, ಮುಸ್ಲಿಮ್ ಓಲೈಕೆಯ ಭಾಷಣಗಳು ಹೀಗೆ ಈ ಇಫ್ತಾರ್ ಕೂಟ ಎನ್ನುವುದು ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡು ರಾಜಕಾರಣಿಗಳ ಮತ ಓಲೈಕೆಯ ದಾಳವಾಗಿ ಪರಿವರ್ತನೆಯಾಗುತ್ತಿದೆ.
ಮುಸ್ಲಿಮರ ತಲೆಯುಡುಗೆ ‘ಟೋಪಿ’ ದ್ವಂದಾರ್ಥದಲ್ಲಿ ಬಳಕೆಯಾಗುತ್ತಿದ್ದು ಮುಸ್ಲಿಮರನ್ನು ಓಲೈಸಲು ಇವರು ತಲೆಗೆ ಟೋಪಿ ಹಾಕಿಕೊಳ್ಳುತ್ತಾರೆ. ಆದರೆ ನಿಜಾರ್ಥದಲ್ಲಿ ಮುಸ್ಲಿಮರನ್ನು ಮರಳು ಮಾಡಿ ಅವರಿಗೆ ಟೋಪಿಹಾಕುತ್ತಿರುವುರುದು ಮಾತ್ರ ದುರಂತವಾಗಿದೆ.
ಹಲಾಲ್ ಗಳಿಕೆಯಿಂದ ಗಳಿಸಿದ ಹಣದಿಂದ ಅಲ್ಲಾಹನನ್ನು ಸಂತೃಪ್ತಗೊಳಿಸಲು ದಿನಪೂರ್ತಿ ಉಪವಾಸ ಆಚರಿಸಿ ಯಾರೋ ರಾಜಕೀಯ ನೇತಾರರ ಹರಾಮ್ ಹಣದಿಂದ ಆಯೋಜಿಸಿದ್ದ ಇಫ್ತಾರ್ ಪಾರ್ಟಿಗಳಲ್ಲಿ ಭಾಗವಹಿಸಿ ಉಪವಾಸ ತ್ಯಜಿಸಿ(ಇಫ್ತಾರ್)ದರೆ ಅಲ್ಲಾಹನ ಸಂತೃಪ್ತಿಯಾದರೂ ಹೇಗೆ ಸಿಗಬಹುದು. ಆದ್ದರಿಂದ ಮುಸ್ಲಿಮ್ ಸಮುದಾಯ ರಾಜಕಾರಣಿಗಳ ಇಫ್ತಾರ್ ರಾಜಕೀಯಕ್ಕೆ ಬಲೆ ಬೀಳದೆ ಇಫ್ತಾರ್ ನ ನೈಜ ಉದ್ದೇಶವನ್ನು ಅವರಿಗೆ ತಿಳಿ ಹೇಳಬೇಕಾದುದು ಮುಸ್ಲಿಮ್ ಸಮುದಾಯದ ಕರ್ತವ್ಯವಾಗಿದೆ.
Read These Next
ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು
ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ...
ಆರ್.ಎನ್.ಎಸ್. ನಿಧನ; ಅನಾಥವಾಗಿರುವ ಮುರುಡೇಶ್ವರ
ಭಟ್ಕಳ: ನವ ಮುರ್ಡೇಶ್ವರದ ನಿರ್ಮಾತೃ ತಮ್ಮ ವಿಶಿಷ್ಟ ಸಾಧನೆಯಿಂದಾಗಿ ವಿಶ್ವದಲ್ಲಿಯೇ ಗುರುತಿಸಿಕೊಂಡಿರುವ ರಾಮನಾಗಪ್ಪ ಶೆಟ್ಟಿ (ಡಾ. ...
ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !
ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ...
ಭಟ್ಕಳ: ಉತ್ತರಕನ್ನಡಕ್ಕೆ ದಂಡೆತ್ತಿ ಬಂದವರು ಇನ್ನೂ ದಡ ಸೇರಲೇ ಇಲ್ಲ; ದುಡಿದುಡಿದು ದಣಿವಾದರೂ ದುಂಡಗಾಗಲೇ ಇಲ್ಲ !
ಇದು ಕಾಡಿನ ನಡುವಿನ ಮನುಷ್ಯರ ರೋಧನ ! ರಾಜರ ದಂಡಿನೊಂದಿಗೆ ದಂಡೆತ್ತಿ ಬಂದ ಮರಾಠಿಗರು ಕಾಡಿನಲ್ಲಿಯೇ ತಲೆ ಮರೆಸಿಕೊಂಡು ಶತಮಾನಗಳೇ ...
ಉತ್ತರಕನ್ನಡ ಕಾಂಗ್ರೆಸ್ನಲ್ಲಿ ಧೂಳೆಬ್ಬಿಸಿದ ಡಿಕೆಶಿ ನಡೆ; ಕುಮಟಾ, ಶಿರಸಿಗೆ ಹೊಸ ಅಭ್ಯರ್ಥಿ ಸಾಧ್ಯತೆ ; ದೇಶಪಾಂಡೆ ನಿಗೂಢ ಹೆಜ್ಜೆ
ನಿವಾರ್, ಬುರೆವಿಯಂತಹ ಚಂಡಮಾರುತಗಳು ದೇಶದ ವಿವಿಧ ರಾಜ್ಯಗಳಲ್ಲಿ ಸದ್ದು ಮಾಡುತ್ತಿದ್ದರೂ ಉತ್ತರಕನ್ನಡ ಜಿಲ್ಲೆಗೆ ಅಂತಹ ಹಾನಿಯೇನೂ ...
ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !
ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...
ಪರೀಕ್ಷೆ ಮತ್ತು ಬಲಿದಾನಗಳ ಪ್ರತೀಕ : ಹಜ್ಜ್ ಮತ್ತು ಬಕ್ರೀದ್
ಹಜ್ಜ್ ಮತ್ತು ಬಕ್ರೀದ್ ಇವೆರಡರಲ್ಲೂ ಪ್ರವಾದಿ ಅಬ್ರಹಾಮರ ಜೀವನ ಮತ್ತು ಸಂದೇಶವಿದೆ. ಕುರಾನ್ ನಲ್ಲಿ ಹಲವೆಡೆ ಇವರ ...
ರಮಝಾನ್ ವಿಶೇಷ ಲೇಖನ; ಮಾನವ ಕಳಕಳಿಯ ಹಬ್ಬ “ಈದುಲ್ ಫಿತ್ರ್”
ಇಸ್ಲಾಮಿನಲ್ಲಿ ಕೇವಲ ಎರಡು ಹಬ್ಬಗಳು ಮಾತ್ರ ಇರುವುದು. ಒಂದನೆಯದು 30ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತು ಎರಡನೆಯದು ...
ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ
ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...
ವಿದ್ಯಾವಂತರಿಂದಲೆ ದೇಶಕ್ಕೆ ಅಪಾಯ-ಮುಹಮ್ಮದ್ ಕುಂಞ
ಭಟ್ಕಳ: ವಿದ್ಯಾವಂತರಿಂದಲೇ ದೇಶದಲ್ಲಿ ಸಮಸ್ಯೆಗಳು ಉದ್ಭವಿಸುತ್ತಿದ್ದು ವಿದ್ಯಾವಂತರಿಂದ ದೇಶಕ್ಕೆ ಆಪಾಯ ಬಂದೊದಗುತ್ತಿದೆ ...
ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ
ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ...
ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ -ರಾಘವೇಂದ್ರ ಎಸ್. ಮಡಿವಾಳ
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗೆ ಅರಬ್ಬರು ‘ಸೀರತ್’ ಎಂದು ಕರೆಯುತ್ತಾರೆ. ಆದರೆ ಮುಸ್ಲಿಂ ವಿದ್ವಾಂಸರು ಹೆಚ್ಚಾಗಿ ...
ಕಾರವಾರ ನೌಕಾನೆಲೆಗೆ ಕೇಂದ್ರ ರಕ್ಷಣಾ ಸ್ಥಾಯಿ ಸಮಿತಿ ತಂಡ ಭೇಟಿ.
ಕಾರವಾರ : ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಗೆ ಕೇಂದ್ರ ರಕ್ಷಣಾ ಸ್ಥಾಯಿ ಸಮಿತಿ ಸದಸ್ಯರು ಬುಧವಾರ ಭೇಟಿ ನೀಡಿ ವಾಪಾಸ್ಸಾಗಿದ್ದಾರೆ
ಪೂರ್ಣ ಪ್ರಮಾಣದ ತರಗತಿಗಳ ಆರಂಭಕ್ಕೆ ಕ್ರಮ : ಎಸ್.ಸುರೇಶ್ಕುಮಾರ್
ಶಿವಮೊಗ್ಗ : ಪ್ರಸಕ್ತ ಶೈಕ್ಷಣಿಕ ವರ್ಷದ ಎಲ್ಲಾ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ...
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ
ಮಂಗಳೂರು : ಜಿಲ್ಲೆಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ ...
ಡಾ. ಸ್ವಾತಿ ನಾಯಕ ಅವರಿಗೆ ಪಿ.ಎಚ್.ಡಿ ಪ್ರಧಾನ
ಕಾರವಾರ: ಮೂಲತಃ ಕಾರವಾರದ ಪ್ರೊ. ಸ್ವಾತಿ ನಾಯಕ ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ವಿಶ್ವ ವಿದ್ಯಾಲಯಕ್ಕೆ ...
ಮಂಜುಸುತ ವಿರಚಿತ ಬಸವನಬಾಯಿ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ.
ಭಟ್ಕಳ : ತಾಲೂಕಿನ ಕುರುಂದೂರು ಗ್ರಾಮದ ಬಸವನಬಾಯಿ ಮಹಾಗಣಪತಿ ಕುರಿತು ಮಂಜುಸುತ ಜಲವಳ್ಳಿ ರಚಿಸಿ ಭಕ್ತಿಗೀತೆಗಳ ಕೃತಿ ಜಲಧಾರೆ ದೇವರ ...
ಕಾರವಾರ: ಪಿಹೆಚ್.ಡಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಡಿ.ಎಸ್.ಟಿ. ವಿಜ್ಞಾನ ಮತ್ತು ಇಂಜಿನಿಯರಿಂಗ್ನಲ್ಲಿ ಪಿಹೆಚ್.ಡಿ. ...