ಗೋಕರ್ಣ : ಕುಮಟಾ ತಾಲೂಕಿನ ಹಿರೇಗುತ್ತಿಯ ಉಪ್ಪಾರಗದ್ದೆಯ ಬಳಿ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಗೋಕರ್ಣ ಪಿಎಸ್ಐ ನವೀನ ನಾಯ್ಕ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಂಕರ ಸದಾನಂದ ನಾಯ್ಕ(36) ಬಂಕಿಕೊಡ್ಲ, ನಾಗರಾಜ ಗಣಪಯ್ಯ ಹಳ್ಳೇರ (21) ಬಳಲೆ, ಪ್ರಕಾಶ ಬೊಮ್ಮಯ ಪಟಗಾರ ಹಿರೆಗುತ್ತಿ (4) ಮತ್ತು ಸಂದೇಶ ಕಮಲಾಕರ ಹರಿಕಂತ್ರ (19) ಬರ್ಗಿ ಬಂಧಿತರಾಗಿದ್ದಾರೆ. ಇನ್ನೂ 15ಕ್ಕೂ ಹೆಚ್ಚು ಜನರು ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ 1320 ರೂ. 4 ಕೋಳಿ ಹುಂಜ. 2 ಮೊಬೈಲ್ ಮತ್ತು 1 ಬೈಕ್ ಟ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.