ಪುತ್ತೂರಿನ ಮುಕ್ವೆಯಲ್ಲಿ ಓಮ್ನಿ ಮತ್ತು ಪಿಕಪ್ ನಡುವೆ ಆಪಘಾತ ನಡೆದಿದ್ದು ಓಮ್ನಿ ಯಲ್ಲಿ ದ್ದ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರಗಾಯಗೊಂಡು ಮಂಗಳೂರು ಆಸ್ಪತ್ರೆಗೆದಾಖಲಾಗಿದ್ದಾರೆ.
ವೀರಮಂಗಲದಿಂದ ಪುತ್ತೂರು ಕಡೆಗೆ ಬರುತ್ತಿದ್ದಓಮಿನಿ ಹಾಗೂ ಮುಕೈಯಿಂದ ಪುರುಷರಕಟ್ಟಿಗೆಹೋಗುತ್ತಿದ್ದ ಪಿಕಪ್ ನಡುವೆ ಮಸೀದಿ ಬಳಿಅಪಘಾತ ನಡೆದಿದೆ. ಘಟನೆಯಿಂದಾಗಿ ಗಂಭೀರಗಾಯಗೊಂಡ ಓಮಿನಿಯಲ್ಲಿದ್ದ ವೀರಮಂಗಲ ನಿವಾಸಿಕೃಷ್ಣ ಭಟ್ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದು ಹಾಗೂ ಅವರ ಮಗ ಅವಿನಾಶ್ ಭಟ್ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿಕಪ್ ಜೀಪಿನಲ್ಲಿದ್ದ ಚಾಲಕ ಹೊನ್ನಪ್ಪ ಗೌಡಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಯಲ್ಲಿದಾಖಲಾಗಿದ್ದಾರೆ. ಗಾಯಳುಗಳನ್ನು ಸ್ಥಳೀಯರುಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. ಘಟನಾಸ್ಥಳಕ್ಕೆ ಪುತ್ತೂರು ಪೊಲೀಸರು ಆಗಮಿಸಿ ಪರಿಶೀಲನೆನಡೆಸಿದ್ದಾರೆ.