ಕಾರವಾರ : ರಾಜ್ಯದಲ್ಲಿ ಏಪ್ರಿಲ್ 21ರಿಂದ ನೈಟ್ ಕರ್ಪ್ಯೂ ಜಾರಿಯಲ್ಲಿರುವುದರಿಂದ ಕಾರವಾರ, ಭಟ್ಕಳ, ಸೇರಿದಂತೆ ಇತರೆ ತಾಲೂಕುಗಳಲ್ಲಿ ಜನತೆ ಸ್ಪಂದಿಸಿದ್ದಾರೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರಲಿದೆ. ಹೀಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳ ಜನರು 9 ಗಂಟೆ ಮುಂಚಿತವಾಗಿ ಮನೆ ಕಡೆ ತೆರಳಿದರು.
ಪೊಲೀಸರು ಆಯಾ ಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು. ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ನಿರ್ಬಂಧ ಹೇರಿದ್ದರು.
ಪೊಲೀಸ್ ಅಧಿಕಾರಿಗಳು, ತಹಶಿಲ್ದಾರ ಹಾಗೂ ನಗರಸಭೆ ಆಯುಕ್ತರು ರಾತ್ರಿ ಬೀದಿಗಿಳಿದು ಪರಿಶೀಲನೆ ನಡೆಸಿದರು.