ಶಿರಸಿ : ಇಲ್ಲಿನ ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಡು ಕೋಣದ ಕೊಂಬನ್ನು ಅಕ್ರಮವಾಗಿ ಸಾಗಾಟಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸಮಿವುಲ್ಲಾ ಅಬ್ದುಲ ರೆಹಮಾನ್ ಸಾಬ್ (29) ಬಂಧಿತ. ಈತ ಹೆಗಡೆಕಟ್ಟಾ ಮಸೀದಿ ಹತ್ತಿರದ ನಿವಾಸಿ. ಬಂಧಿತನಿಂದ 25000ರೂ ಮೌಲ್ಯದ ಕಾಡು ಕೋಣದ 2 ಕೊಂಬನ್ನು ವಶಪಡಿಸಿಕೊಳ್ಳಲಾಗಿದೆ.
ಶಿರಸಿ ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ ಮಾರ್ಗದರ್ಶನದಲ್ಲಿ ಶಿರಸಿ ವೃತ್ತ ನಿರೀಕ್ಷಕ ಪ್ರದೀಪ
ಬಿ.ಯು ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐಗಳಾದ ನಂಜಾನಾಯ್ಕ್, ನಾಗೇಂದ್ರನಾಯ್ಕ್ ಮತ್ತು ಸಿಬ್ಬಂದಿಗಳಾದ ಪ್ರದೀಪ, ಮಂಜುನಾಥ ಪೂಜಾರಿ, ಚೇತನ ಕುಮಾರ ಹೆಚ್ ಮತ್ತು ರಮೇಶ ಬೆಳಗಾಂವಕರ್ ಇವರ ತಂಡ ಕಾರ್ಯಾಚರಣೆ ನಡೆಸಿದ್ದರು.
ಆರೋಪಿಯಿಂದ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೊಂಬು ಎಲ್ಲಿಂದ ಬಂತು ಪ್ರಕರಣದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆಂಬುದರ ಬಗ್ಗೆ ತನಿಖೆ ನಡೆಸಲಾಗಿದೆ.ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.