ಉತ್ತರಕನ್ನಡದಲ್ಲಿ ನೂರರ ಗಡಿದಾಟಿಸಿದ ಕೊರೋನಾ. ಶನಿವಾರ ಅತಿ ಹೆಚ್ಚು ಸೋಂಕಿತರು ಗುಣಮುಖ.
ಭಟ್ಕಳ : ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಇದುವರೆಗೆ ಸೋಂಕಿಗೊಳಗಾದ 101 ಮಂದಿ ಸಾವನ್ನಪ್ಪಿದ್ದಾರೆ.
ಸಪ್ಟೆಂಬರ್ 19 ರಂದು ಒಟ್ಟು 175 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಬರೊಬ್ಬರಿ 409 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಕಾರವಾರ ತಾಲೂಕಿನಲ್ಲಿ 28, ಅಂಕೋಲಾ ತಾಲೂಕಿನಲ್ಲಿ 5, ಕುಮಟಾದಲ್ಲಿ 32, ಹೊನ್ನಾವರ, ಭಟ್ಕಳದಲ್ಲಿ ತಲಾ 18, ಶಿರಸಿಯಲ್ಲಿ 24, ಸಿದ್ದಾಪುರದಲ್ಲಿ 8, ಯಲ್ಲಾಪುರದಲ್ಲಿ 15, ಮುಂಡಗೋಡದಲ್ಲಿ 5, ಹಳಿಯಾಳದಲ್ಲಿ 12 ಹಾಗೂ ಜೊಯಿಡಾ ತಾಲೂಕಿನಲ್ಲಿ 10 ಮಂದಿಗೆ ಸೋಂಕು ದೃಢಗೊಂಡಿದೆ.
ಇದುವರೆಗೆ ಜಿಲ್ಲೆಯಲ್ಲಿ 8,110 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 5,872 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,137 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕಾರವಾರ, ಭಟ್ಕಳದಲ್ಲಿ ತಲಾ ಇಬ್ಬರು, ಹೊನ್ನಾವರ, ಸಿದ್ದಾಪುರದಲ್ಲಿ ತಲಾ ಓರ್ವರು ಸಾವನ್ನಪ್ಪಿದ್ದಾರೆ.