ಯಲ್ಲಾಪುರ : ರಸ್ತೆಗೆ ಅಡ್ಡ ಬಂದ ಮಗು ತಪ್ಪಿಸುವವ ಭರದಲ್ಲಿ ಡಿವೈಎಸ್ಪಿ ವಾಹನವೊಂದು ಓಮಿನಿ ಕಾರಿಗೆ ಢಿಕ್ಕಿ ಹೊಡೆದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ನಲ್ಲಿ ಸಂಭವಿಸಿದೆ.
ಕಾರವಾರ ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ ಅವರಿದ್ದ ಜೀಪ್ ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿತ್ತು. ಅರೆಬೈಲ್ ಸಮೀಪ ವಾಹನ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿ ವಾಹನದ ಎದುರು ಮಗು ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋಗಿ ಜೀಪ್ ಓಮಿನಿ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಓಮ್ನಿಯಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಅವರಿಗೂ ಗಾಯ ಉಂಟಾಗಿದೆ.
ಸ್ಥಳಕ್ಕೆ ಯಲ್ಲಾಪುರ ಪೊಲೀಸರ ಭೇಟಿದ್ದು ಪರಿಶೀಲನೆ ನಡೆಸಿದ್ದಾರೆ.