ಒಡಿಶಾ:ಬ್ಯಾಂಕ್ ಲೂಟಿಕೋರರನ್ನು ಬಡಿದು ಕೊಂದ ಜನತೆ

Source: so english | By Arshad Koppa | Published on 6th January 2017, 2:05 PM | National News | Incidents | Don't Miss |

(ಒಡಿಶಾ): ಬ್ಯಾಂಕ್ ಒಂದನ್ನು ಲೂಟಿ ಮಾಡಿ ಓಡಿ ಹೋಗುತ್ತಿದ್ದಾಗ ಸಿಕ್ಕಿಬಿದ್ದ ಇಬ್ಬರು ಕಳ್ಳರನ್ನು ಜನರು ಹಿಗ್ಗಾ ಮುಗ್ಗಾ ಥಳಿಸಿದ ಪರಿಣಾಮವಾಗಿ ಇಬ್ಬರು ಅಲ್ಲಿಯೇ ಪ್ರಾಣ ತ್ಯಜಿಸಿದ್ದಾರೆ.

ಮೋಟಾರ್ ಸೈಕಲ್ ಬಂದ ಸಶಸ್ತ್ರ ಕಳ್ಳರು ರಾಣಾಪುರ ಪೊಲೀಸ್ ಠಾಣೆಯಮಿತಿಗಳನ್ನು ಅಡಿಯಲ್ಲಿ ಕಸಾಂದಾ ಎಂಬ ಗ್ರಾಮದ ಒಂದು ರಾಷ್ಟ್ರೀಕೃತ ಬ್ಯಾಂಕ್ ಗೆ ಮುತ್ತಿಗೆ ಹಾಕಿ ರೂ 3 ಲಕ್ಷ ಲೂಟಿದ್ದಾರೆ ಎಂದು  ಉಪ ವಿಭಾಗೀಯ ಪೊಲೀಸ್ ಅಧಿಕಾರಿ  ಜಗನ್ನಾಥ ರೆಡ್ಡಿಯವರು ಹೇಳಿದರು.

ಮೂರು ಕಚ್ಚಾ ಬಾಂಬುಳನ್ನು ಮತ್ತು ಚೂಪಾದ ಶಸ್ತ್ರಾಸ್ತ್ರಗಳ ತೋರಿಸುವ ಮೂಲಕ ಅವರು ಸಿಬ್ಬಂದಿ ಮತ್ತು ಗ್ರಾಹಕರಿಗೆ ಬೆದರಿಕೆ ಒಡ್ಡಿ ನಂತರ ನಗದು ಲೂಟಿ ಮಾಡಿ ಬ್ಯಾಂಕ್ ನಿಂದ ಹೊರಬಂದಿದ್ದಾರೆ. ಆದರೆ ಸ್ಥಳೀಯರು ಅವರನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಕಳ್ಳರು ಒಂದು ಬಾಂಬ್ ಎಸೆದಿದ್ದಾನೆ. 

ಆದರೆ ಬಾಂಬಿಗೂ ಬೆದರದ ಜನ ದೊಡ್ಡ ಗುಂಪಿನಲ್ಲಿ ಈ ಮೂವನ್ನೂ ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ಥಳಿಸಿದರು ಈ ಥಳಿತದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮೂರನೆಯವನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮೃತರ ಪರಿಚಯ ಇನ್ನೂ ಆಗಿಲ್ಲ ಹಾಗೂ ಮೂರನೆಯ ವ್ಯಕ್ತಿ ಪ್ರಜ್ಞೆ ಪಡೆದ ಬಳಿಕವಷ್ಟೇ ಇತರ ವಿವರಗಳು ಲಭ್ಯವಾಗಲಿವೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...