ಭಟ್ಕಳ ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿ ಗೋರಿಕಲ್ ಅಂಗನವಾಡಿ ಕೇಂದ್ರದಲ್ಲಿ ಪುಷ್ಠಿಕ ಆಹಾರ ಸಪ್ತಾಹ,ಮತ್ತು ರಾಷ್ಟ್ರೀಯ ಪೋಷಣಾ ಅಭಿಯಾನ ಹಾಗೂ ಆರಾಧ್ಯ ಮಗುವಿನ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮ ನಡೆಯಿತು.
ನಂತರ ಶಿಶು ಅಭಿವೃದ್ಧಿ ಯೊಜನಾಧಿರಿ ಸುಶೀಲಾ ಮೊಗವೀರ ಮಾತನಾಡಿ ಗರ್ಭಿಣಿ ಮಹಿಳೆಯ ಆರೋಗ್ಯ ಕಾಪಾಡುವಷ್ಟೇ ಪ್ರಾಮುಖ್ಯ ಹೆರಿಗೆಯಾದ ಮೇಲೂ ಇರಬೇಕು. ಈ ಸಂದರ್ಭದಲ್ಲಿ ಯಾವುದೇ ಖಾಯಿಲೆಗಳು ಬಾರದಂತೆ ಸುರಕ್ಷಿತವಾಗಿ ನೋಡಿಕೊಳ್ಳುವುದು ಮುಖ್ಯ. ಇಲಾಖೆ ಸೌಲಭ್ಯಗಳಾದ ಭಾಗ್ಯಲಕ್ಷ್ಮಿ ಮಾತೃಪೂರ್ಣ ಮಾತ್ರ ವಂದನಾ ಹಾಗೂ ಮಾತು ಶ್ರೀ ಯೋಜನೆಗಳ ಬಗ್ಗೆ ಪೌಷ್ಟಿಕಾಂಶ ಆಹಾರದ ಮಹತ್ವದ ಬಗ್ಗೆ ತಾಯಂದಿರಿಗೆ ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡುವತ್ತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ ಮುಂಡಳ್ಳಿ ಸದಸ್ಯೆ ಶಿವಾನಿ ಶಾಂತರಾಮ್,
ಹಾಗೂ ಊರಿನ ಮುಖಂಡರಾದ ನಾರಾಯಣ ನಾಯ್ಕ, ಮಾತನಾಡಿದರು.
ನಂತರ ಬೆಳಕೆ ಸರ್ಕಾರಿ ಆಸ್ಪತ್ರೆಯ ವೈದರಾದ ಡಾ:ಸಂತೋಷ, ಗರ್ಭಿಣಿ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಅರಿಯು ಮೂಡಿಸಿದ್ದರು.
ಕಾರ್ಯಕ್ರಮಗೆ ಬಂದತಾ ಗರ್ಭಿಣಿ ಮಹಿಳೆಯರಿಗೆ ವಿವಿಧ ಬಗ್ಗೆ ತಿಂಡಿ ತಿನಿಸುಗಳು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗಪ್ಪ ನಾಯ್ಕ , ಸ್ಥಳೀಯ ಊರಿನವರಾದ ಹರೀಶ್ ನಾಯ್ಕ.ಆರೋಗ್ಯ ಸಾಯಕಿ ನಿರ್ಮಲ ಶೇಟಿ,ಅಂಗನವಾಡಿ ಶಾಲೆ ಶಿಕ್ಷಕಿ ಸವಿತಾ ನಾಯ್ಕ, ಆಶಾ ಕಾರ್ಯಕರ್ತೆ ಜಯಶ್ರೀ ನಾಯ್ಕ ,ಬಾಲ ವಿಕಾಶ ಸಮೀತಿ ಸದಸ್ಯರು,ಹಾಗೂ
ಕಾರ್ಯಕ್ರಮವ ನಿರೂಪಣೆ ಹಾಗೂ ವಂದನಾರ್ಪಣೆ ಪದ್ಮನಾಯ್ಕ ನಿರ್ವಹಿಸಿದ್ದರು.