ನೌಕಾನೆಲೆ ಭೂಸ್ವಾಧೀನವಾದ ಜಮೀನಿನ ಹೆಚ್ಚುವರಿ ಪರಿಹಾರಕ್ಕೆ ದಾಖಲೆ ಸಲ್ಲಿಸಲು ಸೂಚನೆ
ಕಾರವಾರ: ನೌಕಾನೆಲೆ ಯೋಜನೆಯಡಿ ಭೂಸ್ವಾಧೀನವಾದ ಜಮೀನಿಗೆ ಸಂಬಂಧಪಟ್ಟಂತೆ ಹೆಚ್ಚುವರಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ಈವರೆಗೆ ಹೆಚ್ಚುವರಿ ಪರಿಹಾರ ಪಡೆಯದ ಫಲಾನುಭವಿಗಳು ದಾಖಲೆಗಳನ್ನು ಹಾಜರುಪಡಿಸುವಂತೆ ಕಾರವಾರ ವಿಶೇಷ ಭೂಸ್ವಾಧೀನಾಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಹೆಚ್ಚುವರಿ ಪರಿಹಾರ ಕುರಿತು ಅರ್ಜಿ ಸಲ್ಲಿಸಿದವರಿಗೆ ಭೂಕೋರಿಕೆ ಸಂಸ್ಥೆಯವರು ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಿ ಶೇ.98ರಷ್ಟು ಫಲಾನುಭವಿಗಳು ಪರಿಹಾರವನ್ನು ಪಡೆದಿದ್ದಾರೆ. ಉಳಿದವರು ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರೂ ಈವರೆಗೆ ಅವರು ಬಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿ ನೋಟಿಸ್ ಪಡೆದಿರುವ ಫಲಾನುಭವಿಗಳು ತಮ್ಮ ಅವಶ್ಯಕ ದಾಖಲೆಗಳನ್ನು ಸಲ್ಲಿಸುವಂತೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.