ನವದೆಹಲಿ: ದಲಿತರು ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಅವರಿಗೆ ಮೀಸಲಾತಿಯ ಸೌಲಭ್ಯ ಗಳು ಸಿಗುವುದಿಲ್ಲ ಎಂದು ಕೇಂದ್ರ ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಅವರು, ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರು, ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿ ಇರಿಸಲಾಗಿರುವ
ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸು ವಂತಿಲ್ಲ. ಹಾಗೆಯೇ, ಇತರೆ ಮೀಸಲಾತಿ ಸೌಲಭ್ಯಗಳೂ ಸಿಗುವುದಿಲ್ಲ ಎಂದರು.
ಆದರೆ, ಹಿಂದು, ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಮತಾಂತರವಾದರೆ ಅಂಥವರಿಗೆ ಈ ಮೀಸಲು ಸೌಲಭ್ಯ ಸಿಗಲಿದೆ ಎಂದೂ ಸ್ಪಷ್ಟಪಡಿಸಿದರು. ಸಂವಿಧಾನದ ಪ್ಯಾರಾ 3(ಪರಿಶಿಷ್ಟ ಜಾತಿ)ಯಲ್ಲಿ ಹೇಳಿರುವಂತೆ ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮದ ಹೊರತಾಗಿ ಬೇರೆಯವರಿಗೆ ಮೀಸಲಾಗಿಟ್ಟ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಹಕ್ಕಿಲ್ಲ ಟ ಎಂದು ವಿವರಿಸಿದರು. ಹಾಗೆಯೇ, ಈ ವಿಚಾರದಲ್ಲಿ ಯಾವುದೇ ತಿದ್ದು ಪಡಿ ತರುವ ಯೋಚನೆಗಳೂ ಸರ್ಕಾ ರದ ಮುಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.