ಮಂಗಳೂರು ಗೋಲಿಬಾರ್: ಹಲವು ಪ್ರಶ್ನೆಗಳಿಗೆ ಪೊಲೀಸರಲ್ಲಿ ಉತ್ತರವೇ ಇಲ್ಲ: New Indian Express ವರದಿ

Source: sonews | By Staff Correspondent | Published on 21st December 2019, 11:14 PM | Coastal News | Special Report |

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರ ಮೇಲೆ ಗುರುವಾರ ನಗರದಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮಂಗಳೂರಿನಲ್ಲಿ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಕೈಗೆತ್ತಿಕೊಂಡ ಕ್ರಮಗಳ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಪೊಲೀಸರು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಸಂಪೂರ್ಣ ವಿಫಲರಾಗಿದ್ದಾರೆಂಬ ಆರೋಪಗಳೂ ಕೇಳಿ ಬಂದಿವೆ ಎಂದು newindianexpress.com ವರದಿ ಮಾಡಿದೆ.

ಪ್ರತಿಭಟನಕಾರರ ಮೇಲಿನ 'ವಿಪರೀತ' ಪೊಲೀಸ್ ಕಾರ್ಯಾಚರಣೆಯನ್ನು ಹತ್ತಿಕ್ಕುವಲ್ಲಿ ಪ್ರಯತ್ನಿಸದ ನಗರ ಪೊಲೀಸ್ ಆಯುಕ್ತ  ಪಿ.ಎಸ್. ಹರ್ಷ  ಹಿರಿಯಾಧಿಕಾರಿಗಳಿಂದ ತರಾಟೆಗೊಳಗಾಗಿದ್ದಾರಲ್ಲದ,  ಅವರ ವಿರುದ್ಧ ಕ್ರಮಕ್ಕೂ ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆಂದು ಮೂಲಗಳು ತಿಳಿಸಿರುವುದಾಗಿ newindianexpress.com ವರದಿ ತಿಳಿಸಿದೆ.

ಪೊಲೀಸ್ ನಿಯಮಗಳ ಪ್ರಕಾರ ಇಂತಹ ಸಂದರ್ಭಗಳಲ್ಲಿ ಪ್ರತಿಭಟನಾಕಾರರ ಮೊಣಕಾಲಿನ ಕೆಳಗೆ ಗುಂಡು ಹಾರಿಸಬೇಕಾಗಿದೆಯಾದರೂ ಪೊಲೀಸರು ಹಾರಿಸಿದ ಎಂಟು ಗುಂಡುಗಳ ಪೈಕಿ ಏಳು ಸಂತ್ರಸ್ತರ ಸೊಂಟದ ಮೇಲಿನ ಭಾಗಗಳಿಗೆ ತಾಗಿತ್ತು. ಒಂದು ಬುಲೆಟ್ ಅಂತೂ ಮಾಜಿ ಮೇಯರ್ ಕೆ. ಅಶ್ರಫ್ ಅವರ ತಲೆಗೆ ಉಜ್ಜಿ ಹೋಗಿದ್ದರೆ, ಇನ್ನೊಂದು ವಿದ್ಯಾರ್ಥಿಯೊಬ್ಬನ ಎದೆಗೆ ತಾಗಿದೆ. ಘಟನೆಯ ಕುರಿತಾದ ಹಲವು ವೀಡಿಯೋಗಳಲ್ಲಿ ಪೊಲೀಸರು ಎದೆಯ ಮಟ್ಟದಲ್ಲಿ ಗುಂಡು ಹಾರಿಸುತ್ತಿರುವುದು ಕಾಣಿಸುತ್ತದೆ.

ಹಲವಾರು ಸುತ್ತು ಗುಂಡು ಹಾರಿಸಿದ ಹೊರತಾಗಿಯೂ ಯಾರೂ ಸಾಯಲಿಲ್ಲವೇಕೆ ಎಂದು ಒಬ್ಬರು ಪೊಲೀಸ್ ಇನ್‍ಸ್ಪೆಕ್ಟರ್ ಸಹೋದ್ಯೋಗಿಯನ್ನು ಕೇಳುತ್ತಿರುವ ವೀಡಿಯೋ ಕೂಡ ಹರಿದಾಡುತ್ತಿದ್ದು ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಿಂತ ಹೆಚ್ಚಾಗಿ ಬೇರೆ ಉದ್ದೇಶ  ಅವರದ್ದಾಗಿತ್ತೆಂಬುದು ಸ್ಪಷ್ಟ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ವೀಡಿಯೋವನ್ನು ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದಾರೆ.

ಈ ವೀಡಿಯೋ ಕುರಿತು ತನಗೆ ತಿಳಿದಿಲ್ಲ ಎಂದು ಹೇಳಿದ ಪೊಲೀಸ್ ಆಯುಕ್ತರು ಅದೇ ಸಮಯ ಅದರ ಕುರಿತು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಯೊಂದರ ಕೊಠಡಿಯ ಬಾಗಿಲನ್ನು ಪೊಲೀಸರು ತುಳಿಯುತ್ತಿರುವ ವೀಡಿಯೋ ಕುರಿತೂ ಅವರು ಪ್ರತಿಕ್ರಿಯಿಸಿಲ್ಲ.

ಪ್ರತಿಭಟನಾಕಾರರ ಸಂಖ್ಯೆ 6,000ದಿಂದ 7,000 ತನಕ ಇತ್ತು ಎಂದು ಆಯುಕ್ತರು ಹೇಳಿರುವುದೂ ಉತ್ಪ್ರೇಕ್ಷೆಯಾಗಿದೆಯಲ್ಲಿದೆ, 33 ಪೊಲೀಸರಿಗೆ ಘಟನೆಯಲ್ಲಿ ಗಾಯಗಳುಂಟಾಗಿದೆ ಎಂದು ಅವರು ನೀಡಿರುವ ಸಂಖ್ಯೆ ಹಾಗೂ  ಡಿಸಿಪಿ ಅರುಣಾಂಶುಗಿರಿ ಅವರ ಕೈಯ್ಯನ್ನು ಪ್ರತಿಭಟನಾಕಾರರು ಬಹುತೇಕ ತುಂಡರಿಸಿ ಬಿಟ್ಟಿದ್ದರು ಎಂದು ಹೇಳಿಕೆಯೂ ತಪ್ಪು ಎಂದು ಮೂಲಗಳು ಹೇಳಿವೆ ಎಂದು newindianexpress.com ವರದಿ ತಿಳಿಸಿದೆ.

ಗೋಲಿಬಾರಿನಲ್ಲಿ ಮೃತರಾದ ಇಬ್ಬರ ಮೃತದೇಹ ಇರಿಸಲಾಗಿದ್ದ ವೆನ್ಲಾಕ್ ಆಸ್ಪತ್ರೆಯ ಹೊರಗೆ ಕೇರಳದಿಂದ 50 ಮಂದಿ ವರದಿ ಮಾಡಲೆಂದು  ಬಂದಿದ್ದರು. ಆದರೆ ಅವರು ನಗರಕ್ಕೆ ಅಪರಿಚಿತರಾಗಿದ್ದರಿಂದ ಅವರಿಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಬಂಧಿಸಲಾಗಿತ್ತು ಎಂದು ಆಯುಕ್ತ ಹೇಳಿದ್ದರು. ಆದರೆ ವಾಸ್ತವವಾಗಿ ಅವರ ಸಂಖ್ಯೆ 8 ಆಗಿತ್ತೇ ಹೊರತು 50 ಆಗಿರಲಿಲ್ಲ.

ಘಟನೆಯಲ್ಲಿ ಗಾಯಗೊಂಡ ನಾಗರಿಕರ ಸಂಖ್ಯೆ 5 ಎಂದು ಆಯುಕ್ತರು ಹೇಳಿದ್ದರೆ ಕನಿಷ್ಠ 25 ಮಂದಿ ಗಾಯಾಳುಗಳಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃಪೆ:ವಾರ್ತಾಭಾರತಿ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...