ಭಟ್ಕಳ: ಇತ್ತಿಚೆಗೆ ಚಿಕ್ಕಬಳ್ಳಾಪುರದಲ್ಲಿ ಜರಗಿದ ರಾಜ್ಯಮಟ್ಟದ ಐ.ಸಿ.ಎಸ್.ಇ ಶಾಲೆಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಭಟ್ಕಳ ನ್ಯೂ ಶಮ್ಸ್ ಸ್ಕೂಲ್ ತಂಡದ ಐದು ವಿದ್ಯಾರ್ಥಿಗಳು ಸೆ.12 ಮತ್ತು 13 ರಂದು ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಗಳಲ್ಲಿ ರಾಜ್ಯ ತಂಡಕ್ಕೆ ತೃತೀಯಾ ಸ್ಥಾನವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಲ್ಲಿ ನ್ಯೂಶಮ್ಸ್ ಸ್ಕೂಲ್ ತಂಡದ ಸೈಫುಲ್ಲಾ ಖತೀಬ್ ತಂಡದ ನಾಯಕರಾಗಿದ್ದರು. ಅಲ್ಲದೆ ರಾಷ್ಟ್ರಮಟ್ಟದಲ್ಲಿ ತನ್ನ ಉತ್ತಮ ಪ್ರದರ್ಶನಕ್ಕಾಗಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (school games federation of india) ಕ್ಕಾಗಿ ಆಯ್ಕೆಯಾಗಿದ್ದಾನೆ ಎಂದು ರಾಜ್ಯ ತಂಡದ ಕೋಚ್ ಭಟ್ಕಳದ ನ್ಯೂಶಮ್ಸ್ ಸ್ಕೂಲ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಖಲೈನ್ ಎಸ್.ಎಂ. ತಿಳಿಸಿದ್ದಾರೆ.
ಇಸ್ಮಾಯಿಲ್ ಮೊಹತೆಶಮ್, ನುಫೈ ಆಹ್ಮದ್, ನುಜ್ಹಾ ಆಹ್ಮದ್, ಹಾಗೂ ಉಬೈದ್ ಬರ್ಮಾವರ್ ರಾಷ್ಟ್ರೀಯ ತಂಡದಲ್ಲಿ ಆಡಿದ ಇತರ ಆಟಗಾರರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂಧಿ ವರ್ಗ ಅಭಿನಂದಿಸಿದೆ.
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಗೆ ಆಯ್ಕೆಗೊಂಡ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿ ಹಾಗೂ ರಾಜ್ಯ ಕಬಡ್ಡಿ ತಂಡದ ನಾಯಕ ಸೈಫುಲ್ಲಾ ಖತೀಬ್