ಶಿವಮೊಗ್ಗ: ನವದೆಹಲಿಯ ಭಾರತೀಯ ಸಸ್ಯರೋಗಶಾಸ್ತ್ರ ಸೊಸೈಟಿಯು ಜನವರಿ 16 ರಿಂದ 20ರವರೆಗೆ ನವದೆಹಲಿಯಲ್ಲಿ ಏರ್ಪಡಿಸಿದ್ದ 7ನೇ ಅಂತರ್ರಾಷ್ಟ್ರೀಯ ಸಸ್ಯರೋಗಶಾಸ್ತ್ರದಲ್ಲಿ ವಿಶ್ವಸಂಸ್ಥೆಯ ಸಮಗ್ರ ಅಭಿವೃದ್ಧಿಯ ಗುರಿ ಎಂಬ ಸಮ್ಮೇಳನದಲ್ಲಿ ಶಿವಮೊಗ್ಗದ ಕೃಷಿ ಮತ್ತುತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ.ನಾಯ್ಕ್ರವರು ಸಸ್ಯ ಬೆಳೆವಣಿಗೆಯಲ್ಲಿ ಸಹಾಯಕವಾದ ಸೂಕ್ಷ್ಮಾಣುಜೀವಿಗಳ, ಸಸ್ಯರೋಗ ಹತೋಟಿ, ಸಸ್ಯರೋಗದ ನಿರೋಧಕತೆ, ಸಂಶೋಧನೆ ಮುಂತಾದ ವಿಷಯಗಳಲ್ಲಿನ ಪರಿಣಿತಿ, ಅಭಿವೃದ್ಧಿ ಹಾಗೂ ವಿಸ್ತರಣೆಯನ್ನು ಪರಿಗಣಿಸಿ `ರಾಷ್ಟ್ರಮಟ್ಟದ ಮುಂಡಕೂರ್ ಮೆಮೋರಿಯಲ್ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಪ್ರಶಸ್ತಿಯು ಸಸ್ಯರೋಗ ಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಕೊಡಬಹುದಾದ ಅತ್ಯುನ್ನತ್ತ ಪ್ರಶಸ್ತಿಯಾಗಿದ್ದು, ಡಾ.ನಾಯ್ಕ್ ಅವರು ಈ ಪ್ರಶಸ್ತಿಯನ್ನು ತಮ್ಮ ಶಿಷ್ಯಕೋಟಿ ಮತ್ತು ವಿಜ್ಞಾನಿ ಬಂಧು-ಬಳಗಕ್ಕೆ ಮತ್ತು ವಿಶ್ವವಿದ್ಯಾಲಯಕ್ಕೆ ಸಂದ ಗೌರವ ಎಂದವರು ತಿಳಿಸಿತ್ತಾರೆ. ಈ ಸುಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿಜ್ಞಾನಿಗಳು, ನೌಕರ ಬಂಧುಗಳು ಹಾಗೂ ಕಾರ್ಮಿಕರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ.ನಾಯ್ಕ್ರವರಿಗೆ ಅಭಿನಂದಿಸಿದ್ದಾರೆ.