ಮಂಗಳೂರು ವಿಘ್ನೇಶ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ನರೇಶ ಶೆಣೈ ವಿಚಾರಣೆ ನಡೆಸಿ. ಕಾಂಗ್ರೆಸ
ಮಂಗಳೂರು : ಯುವಕ ವಿಘ್ನೇಶ್ ನಾಯಕ್ ಆತ್ಮಹತ್ಯೆ ವಿಚಾರದಲ್ಲಿ ಜನರಲ್ಲಿ ಗೊಂದಲವಿದೆ . ನರೇಶ್ ಶೆಣೈ ಅವರನ್ನ ವಿಚಾರಣೆಗೆ ಒಳಪಡಿಸಬೇಕು ಎಂದು ಮಂಗಳೂರಿನಲ್ಲಿ ಯುಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
RTI ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಯಲ್ಲಿ ವಿಘ್ನೇಶ್ ಹೆಸರಿತ್ತು. ಹತ್ಯೆ ಬಳಸಿದ ಕ್ವಾಲಿಸ್ ಕಾರು ವಿಘ್ನೇಶ್ ಹೆಸರಲ್ಲಿತ್ತು. ಹತ್ಯೆ ಬಳಿಕ ವಿಘ್ನೇಶ್ ನಾಯಕ್ ನಾಪತ್ತೆಯಾಗಿದ್ದರು. ನರೇಶ್ ಶೆಣೈ ಸಂಸ್ಥೆಯಲ್ಲಿ ವಿಘ್ನೇಶ ಸಿಬ್ಬಂದಿ ಆಗಿದ್ದರು. ನಮೋ ಬ್ರಿಗೇಡ್ ಮುಖ್ಯಸ್ಥನಾಗಿದ್ದ ನರೇಶ್ ಶೆಣೈ ವಿನಾಯಕ ಬಾಳಿಗಾ ಹತ್ಯೆಯ ಪ್ರಮುಖ ಆರೋಪಿಯೆಂದು ಆಪಾದಿಸಿದ್ದಾರೆ.
ಹತ್ಯೆ ಪ್ರಕರಣ ಸಂಬಂಧ ವಿಘ್ನೇಶ್ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಆತ್ಮಹತ್ಯೆ ಹಿಂದೆ ನರೇಶ್ ಶೆಣೈ ಕೈವಾಡದ ಬಗ್ಗೆ ಪ್ರಶ್ನೆ ಎದ್ದಿದೆ. ವಿನಾಯಕ ಬಾಳಿಗಾ ಸಹೋದರಿಗೂ ಬೆದರಿಕೆ ಇದೆ.
ವಿನಾಯಕ ಸಹೋದರಿ, ಉಳಿದ ಸಾಕ್ಷಿಗಳಿಗೆ ರಕ್ಷಣೆ ಬೇಕಿದೆ.
ನರೇಶ್, ವಿಘ್ನೇಶ್ ಕಾಲ್ ಡಿಟೇಲ್ಸ್ ಬಹಿರಂಗ ಮಾಡಬೇಕು..
ಆತ್ಮಹತ್ಯೆಗೂ ನರೇಶ್ ಶೆಣೈಗೂ ಸಂಬಂಧ ಇದೆಯಾ ಅನ್ನೋದು ಬಹಿರಂಗವಾಗಲಿ.
ಆತ್ಮಹತ್ಯೆ ಕುರಿತು ಉನ್ನತ ತನಿಖೆಗೆ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಮಂಗಳೂರಿನಲ್ಲಿ ಮಿಥುನ್ ರೈ ಹೇಳಿಕೆ ನೀಡಿದ್ದಾರೆ.