ಮಂಗಳೂರು ವಿಘ್ನೇಶ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ನರೇಶ ಶೆಣೈ ವಿಚಾರಣೆ ನಡೆಸಿ. ಕಾಂಗ್ರೆಸ

Source: So News | Published on 26th November 2020, 12:56 AM | Coastal News |

ಮಂಗಳೂರು :  ಯುವಕ ವಿಘ್ನೇಶ್ ನಾಯಕ್ ಆತ್ಮಹತ್ಯೆ ವಿಚಾರದಲ್ಲಿ‌ ಜನರಲ್ಲಿ ಗೊಂದಲವಿದೆ . ನರೇಶ್ ಶೆಣೈ ಅವರನ್ನ ವಿಚಾರಣೆಗೆ ಒಳಪಡಿಸಬೇಕು ಎಂದು  ಮಂಗಳೂರಿನಲ್ಲಿ ಯುಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ  ಹೇಳಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 
RTI ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಯಲ್ಲಿ ವಿಘ್ನೇಶ್ ಹೆಸರಿತ್ತು. ಹತ್ಯೆ ಬಳಸಿದ ಕ್ವಾಲಿಸ್ ಕಾರು ವಿಘ್ನೇಶ್ ಹೆಸರಲ್ಲಿತ್ತು. ಹತ್ಯೆ ಬಳಿಕ ವಿಘ್ನೇಶ್ ನಾಯಕ್ ನಾಪತ್ತೆಯಾಗಿದ್ದರು. ನರೇಶ್ ಶೆಣೈ ಸಂಸ್ಥೆಯಲ್ಲಿ ವಿಘ್ನೇಶ  ಸಿಬ್ಬಂದಿ ಆಗಿದ್ದರು. ನಮೋ ಬ್ರಿಗೇಡ್ ಮುಖ್ಯಸ್ಥನಾಗಿದ್ದ ನರೇಶ್ ಶೆಣೈ ವಿನಾಯಕ ಬಾಳಿಗಾ ಹತ್ಯೆಯ ಪ್ರಮುಖ ಆರೋಪಿಯೆಂದು ಆಪಾದಿಸಿದ್ದಾರೆ.

ಹತ್ಯೆ ಪ್ರಕರಣ ಸಂಬಂಧ ವಿಘ್ನೇಶ್ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಆತ್ಮಹತ್ಯೆ ಹಿಂದೆ ನರೇಶ್ ಶೆಣೈ ಕೈವಾಡದ ಬಗ್ಗೆ ಪ್ರಶ್ನೆ ಎದ್ದಿದೆ. ವಿನಾಯಕ ಬಾಳಿಗಾ ಸಹೋದರಿಗೂ ಬೆದರಿಕೆ ಇದೆ.

ವಿನಾಯಕ ಸಹೋದರಿ, ಉಳಿದ ಸಾಕ್ಷಿಗಳಿಗೆ ರಕ್ಷಣೆ ಬೇಕಿದೆ. 
ನರೇಶ್, ವಿಘ್ನೇಶ್ ಕಾಲ್ ಡಿಟೇಲ್ಸ್ ಬಹಿರಂಗ ಮಾಡಬೇಕು..

ಆತ್ಮಹತ್ಯೆಗೂ ನರೇಶ್ ಶೆಣೈಗೂ ಸಂಬಂಧ ಇದೆಯಾ ಅನ್ನೋದು ಬಹಿರಂಗವಾಗಲಿ.
ಆತ್ಮಹತ್ಯೆ ಕುರಿತು ಉನ್ನತ ತನಿಖೆಗೆ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು‌ ಮಂಗಳೂರಿನಲ್ಲಿ ಮಿಥುನ್ ರೈ ಹೇಳಿಕೆ ನೀಡಿದ್ದಾರೆ.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...