ಮಂಗಳೂರು : ಕಾಂಗ್ರೆಸ್ ಈಗ ತಿಥಿ ಪಾರ್ಟಿ ಆಗ್ತಾ ಇದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ನಳೀನ್ ಅಧಿಕಾರ ಬಂದ ಬಳಿಕ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಸಂಪ್ರದಾಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ನಮಗೆ ಸಂಪ್ರದಾಯ ಇದೆ ಎಂದು ಹೇಳಿದ್ದಾರೆ.
ಸಂಸದರಿಗೆ ಅಧಿಕಾರದ ಮದ ಏರಿದೆ. ನಳೀನ್ಗೆ ನಾಲಿಗೆಯಲ್ಲಿ ಹಿಡಿತ ಇರಲಿ, ಅತಿಯಾದರೆ ಜನರು ಹಾಸ್ಯಗಾರ ಎನ್ನುತ್ತಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಕಿಡಿ ಕಾರಿದ್ದಾರೆ.