• ಪ್ರ.ಕಾ.ಯಾಗಿ ಸಿದ್ದಿಖ್ ಇಸ್ಮಾಯಿಲ್
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಶತಮಾನೋತ್ಸವದ ಸಂಭ್ರಮದಲ್ಲಿರುವ ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ನ್ಯಾಯಾವಾದಿ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ ಆಯ್ಕೆಯಾಗಿದ್ದಾರೆ.
ಶನಿವಾರ ಅಂಜುಮನಾಬಾದ್ ನಲ್ಲಿರುವ ಸಂಸ್ಥೆಯ ಕಾರ್ಯಾಲಯದಲ್ಲಿ ಜರಗಿದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮುಝಮ್ಮಿಲ್ ತಮ್ಮ ಪ್ರತಿಸ್ಪರ್ಧಿ ಜುಕಾಕೋ ಅಬ್ದುಲ್ ರಹೀಮ್ ರನ್ನು ಸೋಲಿಸುವುದರ ಮೂಲಕ ಮುಂದಿನ ನಾಲ್ಕು ವರ್ಷದ ಅವಧಿಕಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಪ್ರಥಮ ಉಪಾಧ್ಯಕ್ಷರಾಗಿ ಸೈಯ್ಯದ್ ಸಮೀರ್ ಸಖ್ಖಾಫ್, ದ್ವಿತೀಯಾ ಉಪಾಧ್ಯಕ್ಷರಾಗಿ ಮುಹಮ್ಮದ್ ಸಾದಿಖ್ ಪಿಲ್ಲೂರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಿದ್ದೀಖ್ ಇಸ್ಮಾಯಿಲ್, ಹೆಚ್ಚುವರಿ ಪ್ರ.ಕಾ. ಯಾಗಿ ಇಸ್ಹಾಖ್ ಶಾಬಂದ್ರಿ, ಹಣಕಾಸು ಕಾರ್ಯದರ್ಶಿಯಾಗಿ ಎಸ್.ಎಂ.ಸೈಯ್ಯದ್ ಅಬ್ದುಲ್ ಅಝೀಮ್ ಅಂಬಾರಿ, ಇಂಜಿನೀಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಕಾರ್ಯದರ್ಶಿಯಾಗಿ ಕೊಚ್ಚಾಪ್ಪೂ ಮುಹಿದ್ದೀನ್ ರುಕ್ನುದ್ದೀನ್, ವೃತ್ತಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಆಫ್ತಾಬ್ ಖಮ್ರಿ, ಪಿ.ಯು. ಮತ್ತು ಪದವಿ ಕಾಲೇಜ್ ಬೋರ್ಡ್ ಕಾರ್ಯದರ್ಶಿಯಾಗಿ ಮೊಹಸಿನ್ ಶಾಬಂದ್ರಿ, ಹೈಸ್ಕೂಲ್ ಬೋರ್ಡ್ ಕಾರ್ಯದರ್ಶಿಯಾಗಿ ವಾಜಿದ್ ಕೋಲಾ, ನರ್ಸರಿ ಮತ್ತು ಪ್ರಾಥಮಿಕ ಶಿಕ್ಷಣ ಕಾರ್ಯದರ್ಶಿಯಾಗಿ ಮುಹಮ್ಮದ್ ಆಸಫ್ ದಾಮೂದಿ, ದೀನಿಯಾತ್ ಬೋರ್ಡ್ ಕಾರ್ಯದರ್ಶಿಯಾಗಿ ಮಲ್ಪಾ ಶಫಿ ಖಾಸ್ಮಿ, ವಕ್ರ್ಸ್ ಕಮಿಟಿ ಕಾರ್ಯದರ್ಶಿಯಾಗಿ ಎಸ್.ಜೆ. ಸೈಯ್ಯದ್ ಹಾಶಿಮ್ ಆಯ್ಕೆಗೊಂಡಿದ್ದಾರೆ.
Muzammil kazia Siddique Ismail