ರಾಷ್ಟ್ರಮಟ್ಟದ ಇನ್‍ಸ್ಪಾಯರ್ ಅವಾರ್ಡ್‍ಗೆ ಮುರುಡೇಶ್ವರದ ಆಗ್ರಿ ರೋಬೊ

Source: sonews | By Staff Correspondent | Published on 18th February 2020, 8:00 PM | Coastal News | Don't Miss |

ಭಟ್ಕಳ: ಇತ್ತಿಚೆಗೆ ಮಂಡ್ಯದಲ್ಲಿ ಜರಗಿದ ರಾಜ್ಯ ಮಟ್ಟದ ಇನ್‍ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಾಲೂಕಿನ ಮುರುಡೇಶ್ವರದ ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ರಾಷ್ಟ್ರಮಟ್ಟದ ಇನ್‍ಸ್ಪಾಯರ್ ಅವಾರ್ಡ್‍ಗೆ ಆಯ್ಕೆಗೊಂಡಿದ್ದಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. 

ಸೌರಶಕ್ತಿಯನ್ನು ಬಳಸಿಕೊಂಡು ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯಾಚರಿಸುವ ಅಗ್ರಿ ರೋಬೋ ಯಂತ್ರವು ನಿರ್ಣಯಕರ ಮೆಚ್ಚುಗೆ ಗಳಿಸಿವುದರ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ. ಡಿಸೆಲ್ ಅಥವಾ ಪೆಟ್ರೋಲ್ ಇಂಧನದ ಸಹಾಯವಿಲ್ಲದೆ ನಿಸರ್ಗ ಶಕ್ತಿಯನ್ನು ಬಳಸಿಕೊಂಡು ಏಕಕಾಲದಲ್ಲಿ ಉಳುವ, ನೀರು ಹಾಯಿಸುವ, ಬೀಜ ಬಿತ್ತನೆಯ ಕೆಲಸವನ್ನು  ಮಾಡುವ ಸಾಮಥ್ರ್ಯವನ್ನು ಆಗ್ರಿ ರೋಬೊ ಹೊಂದಿದೆ ಎನ್ನಲಾಗಿದ್ದು ಈ ಮೂಲಕ ಸಮಯ ಹಾಗೂ ಮಾನವ ಸಂಪನ್ಮೂಲವನ್ನು ಉಳಿಸಬಹುದಾಗಿದೆ. 

ವಿದ್ಯಾರ್ಥಿಯ ಸಾಧನೆಗೆ ಹಾಗೂ ಮಾರ್ಗದರ್ಶಿ ಶಿಕ್ಷಕರಾದ ಪದ್ಮಾ ಪೂಜಾರಿ ಮತ್ತು ರಾಘವೇಂದ್ರ ನಾಯ್ಕರಿಗೆ ಸಂಸ್ಥೆಯ ಅಧ್ಯಕ್ಷ ಮಂಕಾಳು ಎಸ್.ವೈದ್ಯ ನಿರ್ದೇಶಕರಿ ಪುಷ್ಪಲತಾ, ಪ್ರಾಂಶುಪಾಲ ಜಗನ್ನಾಥ್ ಚೀನೆಕರ್ ಹಾಗೂ ಸಿಬ್ಬಿಂದಿ ವರ್ಗ ಅಭಿನಂದಿಸಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...