ವನಹಳ್ಳಿ ಗ್ರಾಮವಾಸಿಯ ಕೊಲೆ ಪ್ರಕರಣ, ಆರೋಪಿತರ ಬಂಧನ
ಧಾರವಾಡ: ಹೆಬ್ಬಳ್ಳಿ ವನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಹೊಲದ ಮ್ಯಾರಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ
ಭೀಮಸಿ ಯಾನೆ ಭೀಮಪ್ಪ ಮಡಿವಾಳಪ್ಪ ಭಂಗಿ, ಶ್ರೀಶೈಲ ವೀರಭದ್ರಪ್ಪ ನರಗುಂದ, ರವಿ ಶಂಕ್ರೆಪ್ಪ ಆರೆನ್ನವರ, ಮಂಜುನಾಥ ಗಂಗಪ್ಪ ಮಟ್ಟಿ ಬಂಧಿತರು.
ಜನವರಿ 12ರಂದು ಶಿವಪ್ಪ ನಿಂಗಪ್ಪ ಆರೆನ್ನವರ (56) ವನಹಳ್ಳಿಅವರನ್ನ ಹಣಕಾಸು ವಿಚಾರದಲ್ಲಿ ತಂಟೆ, ತಕರಾರು ಮಾಡಿಕೊಂಡು ವೈಮನಸ್ಸು ಬೆಳೆಸಿಕೊಂಡು ಮುಖಕ್ಕೆ ಗುದ್ದಿ, ಯಾವುದೋ ವಸ್ತುವಿನಿಂದ ಕುತ್ತಿಗೆಗೆ ಬಿಗಿದು, ಎಳೆದು ಹಾಕಿ ಕೊಲೆ ಮಾಡಿದ್ದರು
ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಪಿರ್ಯಾದಿ ಸಿದ್ದಾರೂಢ ಶಿವಪ್ಪ ಆರೆನ್ನವರ ದೂರು ದಾಖಲಿಸಿದ್ದರು. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು. ಆರೋಪಿ ಪತ್ತೆಗಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಎಂ.ಬಿ ಸಂಕದ ಅವರ ಮೇಲುಸ್ತುವಾರಿಯಲ್ಲಿ ತನಿಖಾಧಿಕಾರಿಗಳಾದ ಗರಗ ಸಿಪಿಐ ಎಸ್.ಸಿ.ಪಾಟೀಲ ಮತ್ತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಸ್.ವಿ.ಸತಾರೆ ಮತ್ತು ಪೊಲೀಸ್ ಸಬ್-ಇನ್ಸಪೆಕ್ಟರ್ ಸುಮಾ.ಎಂ.ಗೋರಾಬಾಳ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.