ಮುಂಡಗೋಡ : ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಮೈನಳ್ಳಿ ಪಂಚಾಯತ್ ವ್ಯಾಪ್ತಿಯ ಕಳಕಿಕಾರೆ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ನಾನಾ ದೊಂಡು ಪಾಟೀಲ(36) ಎಂದು ತಿಳಿದು ಬಂದಿದೆ. ಜುಲೈ 4 ರಂದು ವ್ಯಕ್ತಿಯ ತನ್ನ ಹೊಲ ಸ್ವಚ್ಚತೆಗಾಗಿ ಕೊಲ್ಡು ಹೋಡೆಯುತ್ತಿದ್ದಾಗ ಯಾವುದೋ ವಿಷ ಸರ್ಪ ಕಚ್ಚಿದೆ ಎನ್ನಲಾಗಿದ್ದು ತಕ್ಷಣ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ.