ಪಟ್ಟಣದಲ್ಲಿ ಜಿ೨ ಮಾದರಿಯ ಮನೆಗಳ ನಿರ್ಮಾಣ : ಹೆಬ್ಬಾರ

Source: sonews | By Staff Correspondent | Published on 11th June 2017, 10:21 PM | Coastal News | Incidents |

ಮುಂಡಗೋಡ : ಸಿದ್ದರಾಮಾಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಯಾರೂ ಹಸಿವೆಯಿಂದ ಬಳಲಬಾರದು  ಹಾಗೂ ಸೂರು ಇಲ್ಲದೆ ಕೊರಗಬಾರದೆಂದು ತಿರ್ಮಾನಕ್ಕೆ ಬಂದಿದ್ದು ಆ ಪ್ರಯುಕ್ತ ಸರಕಾರವು ಉಚಿತವಾಗಿ ಅಕ್ಕಿ  ನೀಡುತ್ತಿದೆ ಹಾಗೂ ಪುಕ್ಕಟೆಯಾಗಿ ಮನೆ ನೀಡುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು .
ಅವರು ಪಟ್ಟಣ ಪಂಚಾಯತ್ ಆವರಣದಲ್ಲಿ ಪ.ಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಪಟ್ಟಾವಿತರಣೆ ಮಾಡಿ ಮಾತನಾಡುತ್ತಿದ್ದರು.
ಬರುವ ದಿನಗಳಲ್ಲಿ ೧೦ ಲಕ್ಷಕ್ಕಿಂತ ಅಧಿಕ ಮನೆಗಳನ್ನು ಬಡವರಿಗಾಗಿ ಪುಕ್ಕಟೆಯಾಗಿ ನೀಡಲಾಗುವುದು. ನಮ್ಮ ಸರಕಾರ ಬಡವರ ಪರವಾಗಿದೆ ಅದಕ್ಕಾಗಿ ಉಚಿತವಾಗಿ ಅಕ್ಕಿ, ವಿದ್ಯಾರ್ಥಿಗಳಿಗೆ ಹಾಲು ಪುಸ್ತಕ, ಶಾದಿಭಾಗ್ಯ, ಪುಕ್ಕಟೆಯಾಗಿ ಮನೆ ಹಾಗೂ ಇನ್ನೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ
ಕ್ಷೇತ್ರದ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲ ವಾರ್ಡ್‌ಗಳನ್ನು ಪಕ್ಷಾತೀತವಾಗಿ ಅಭಿವೃದ್ದಿ ಪಡಿಸುತ್ತೇವೆ. ಮುಂಡಗೋಡ ಪಟ್ಟಣದಲ್ಲಿ ಸುಮಾರು ೭೦೦-೮೦೦ ಜನರಿಗೆ ಮನೆಗಳ ಅವಶ್ಯಕತೆ ಇದೆ ಎಂದ ಅವರು ಪಟ್ಟಣದ ಸ್ಲಂ ಪ್ರದೇಶಗಳ ಅಭಿವೃದ್ದಿ ಪಡಿಸಿ ಅಲ್ಲಿ ವಾಸಿಸುವ ಒಂದು ಮನೆಗೆ ಸುಮಾರು ೫ ಲಕ್ಷ ರೂ ಬೆಲೆಯ  ೨೦೦ ಮನೆಗಳನ್ನು  ನಿರ್ಮಾಣ ಮಾಡಲಾಗುವುದು
ಬರುವಂತ ದಿನಗಳಲ್ಲಿ ಹುಬ್ಬಳ್ಳಿ ಯಲ್ಲಿ ಸರಕಾರದಿಂದ ನಿರ್ಮಿತವಾಗಿರುವ ಜಿ೨ ಮಾದರಿಯಲ್ಲಿ ಮನೆಗಳನ್ನು ಕಟ್ಟಲಾಗುವುದು ಎಂದರು. ನಮ್ಮ ಅಧಿಕಾರವಧಿಯಲ್ಲಿ ಮುಂಡಗೋಡ ಪಟ್ಟಣ ಅಭಿವೃದ್ದಿಯಾಗಿದೆ ಎಂದು ಪರ‌ಊರಿನವರು ಹೇಳುತ್ತಿರುವುದು ಕೇಳಿಬರುತ್ತಿದೆ ಎಂದರು
ಬ್ಲಾಕ್ ಕಾಂಗೈ ಅಧ್ಯಕ್ಷ ಹಾಗೂ ಜಿಲ್ಲಾಪಂಚಾಯತ್ ಸದಸ್ಯ ರವಿಗೌಡಾ ಪಾಟೀಲ, ಜಿಪಂ ಸದಸ್ಯ ಎಲ್.ಟಿ.ಪಾಟೀಲ, ತಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ, ಪಪಂ ಅಧ್ಯಕ್ಷ ಮಹ್ಮದರಫೀಕ ಇನಾಮದಾರ, ಎಪಿ‌ಎಮ್‌ಸಿ ಅಧ್ಯಕ್ಷ ದೇವು ಪಾಟೀಲ, ಮಾರ್ಕೇಟಿಂಗ ಸೊಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ,ಎಚ್.ಎಮ್.ನಾಯಕ, ಎಪಿ‌ಎಮ್‌ಸಿ ಸದಸ್ಯ ಮಂಜುನಾಥ ವೆರ್ಣೇಕರ, ಪ.ಪಂ ಸದಸ್ಯರಾದ ಅಲ್ಲಿಖಾನ ಪಠಾಣ, ಲತೀಫ ನಾಲಬಂದ, ಎನ್.ಡಿ.ಕಿತ್ತೂರ ಯುವ ಧುರಿಣ ಮಹಮ್ಮದಗೌಸ ಮಕಾನದಾರ, ಇರ್ಫಾನ್ ಸವಣೂರ, ಆಸೀಫ ಮಕಾನದಾರ, ಜೈನೊ ಬೆಂಡಿಗೇರಿ, ರಾಮಣ್ಣ ಪಾಲೇಕರ, ಮೌನೇಶ್ವರ ಕೊರವರ, ಶಕುಂತಲಾ ತಳವಾರ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಪ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ ಮುಂತಾದ ಕಾಂಗೈಕಾರ್ಯಕರ್ತರು ಉಪಸ್ಥಿತರಿದ್ದರು
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...