ಮುಂಡಗೋಡ :  ನವವಿವಾಹಿತ ದಂಪತಿ ನೇಣಿಗೆ ಶರಣು

Source: sonews | By Staff Correspondent | Published on 24th August 2017, 6:27 PM | Coastal News | State News | Incidents | Don't Miss |

ಮುಂಡಗೋಡ : ಕೇವಲ ಎರಡು ತಿಂಗಳ ಹಿಂದೆಷ್ಟೇ  ವಿವಾಹವಾಗಿದ್ದ ನವದಂಪತಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಬಳಿಯ ಬಾಚಣಿಕೆ ಡ್ಯಾಂ ಪಕ್ಕ ಆತ್ಮಹತ್ಯ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. 
ಹುಬ್ಬಳ್ಳಿ ಹೊಸೂರ ನಿವಾಸಿಗಳಾದ ವೆಂಕಟೇಶ ಅಲಿಯಾಸ್ ಜೋಗಿ ರಾಮರೆಡ್ಡಿ ಮಲ್ಲಸಮುದ್ರ(೨೮) ಹಾಗೂ ಆತನ ಪತ್ನಿ ಅಶ್ವಿನಿ(೨೫) ಬಾಚಣಿಕೆ ಡ್ಯಾಂ ಬಳಿಯ ನರ್ಸರಿಯಲ್ಲಿ ಮರಕ್ಕೆ ಒಂದೇ ಪ್ಲಾಸ್ಟೀಕ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ ನವದಂಪತಿಯಾಗಿದ್ದಾರೆ. ಆತ್ಮಹತ್ಯಮಾಡಿಕೊಂಡಿರುವ ವಿಷಯ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯಿಂದ ಟಾಟಾ ಟವೇರಾ ನಂ ಕೆ.ಎ.೨೫ ಸಿ.೮೭೦೪ ವಾಹನದಲ್ಲಿ ಬಂದಿದ್ದ ವೆಂಕಟೇಶ, ಅಶ್ವಿನಿ ವಾಹನವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಮುನ್ನ ನಮ್ಮ ಸಾವಿಗೆ ನಾವೆ ಕಾರಣ ಎಂದು ಡೆತ್ ನೋಟ ಬರೆದಿಟ್ಟಿದ್ದು ಆಯ್.ಲವ್,ಯೂ ಅಶ್ವಿನಿ ಎಂಬ ಬರಹವು ಇದೆ 
ಆತ್ಮಹತ್ಯೆ ಮಾಡಿಕೊಂಡಿರುವ ನವ ದಂಪತಿ ಉದ್ಯೋಗಿಗಳೇ, ಒಂದೇ ಜಾತಿಯವರೇ, ಅನ್ಯಕೊಮಿನವರೆ, ಆತ್ಮಹತೆ ಮಾಡಿಕೊಂಡಿರುವ ಈ ಕಠೋರ ನಿರ್ಧಾರದ ಹಿಂದೆ ಮದುವೆಗೆ ಎರಡು ಕುಟುಂಬಗಳವರ ವಿರೋಧವಿತ್ತೇ ಇದೊಂದು ಆತ್ಮಹತ್ಯೆಯೋ ಪೂರ್ವನಿಯೋಜಿತ ಕೊಲೆಯೋ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಘಟನಾ ಸ್ಥಳಕ್ಕೆ ಮುಂಡಗೋಡ ಪಿ.ಎಸ್‌ಆಯ್ ಲಕ್ಕಪ್ಪ ನಾಯಕ್ ಮತ್ತು ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿದ್ದು ತನಿಖೆ ನಡೆದಿದೆ
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...