ಮೈಲುಗಲ್ಲಿಗೆ ಕಾರು ಢಿಕ್ಕಿ : ಬೆಂಗಳೂರಿನ ಟೆಕ್ಕಿ ಸಾವು

Source: S O News service | By Staff Correspondent | Published on 5th March 2017, 11:14 PM | Coastal News | Incidents | Don't Miss |

ಮುಂಡಗೋಡ : ಮೈಲುಗಲ್ಲಿಗೆ ಕಾರು ಢಿಕ್ಕಿ ಪಟ್ಟು ಕಾರಿನಲ್ಲಿದ್ದ ಸಾಫ್ಟವೇರ ಇಂಜನಿಯರ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಬಂಕಾಪುರ ರಸ್ತೆಯ  ಸನವಳ್ಳಿ ಗ್ರಾಮದ ಹತ್ತಿರ ರವಿವಾರ ಸಂಜೆ ಸಂಭವಿಸಿದೆ.


ಮೃತಪಟ್ಟವವನನ್ನು ವೆಸ್ಟಬಂಗಾಲ ಮೂಲದ ಹಾಲಿ ಬೆಂಗಳೂರನಲ್ಲಿ ಸಾಫ್ಟವೇರ ಇಂಜನಿಯರ ಕೆಲಸಮಾಡುತ್ತಿರುವ  ಕಪೀಲದೇಬ್ ಕರ್ಮಾಕರ(೨೯) ಎಂದು ತಿಳಿದು ಬಂದಿದೆ
ಭರತ ಚರಣಸಿಂಗ,ಶ್ರೀಪೂರ್ಣಾ ಮಾದಕ, ನಿಮಿಷಾ ದಿಮಾನ, ರಾಹುಲ ಕುಮಾರ(ಡೇಹರಾಡೂನ) ಹಾಗೂ ಮೃತ ಕಪೀಲದೇವ ಕಾರಿನಲ್ಲಿ ಒಟ್ಟು ಐದು ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಬೆಂಗಳೂರ ನಿಂದ ಗೋವಾಕ್ಕೆ ಹೋಗಿದ್ದ ಐದು ಜನರ ತಂಡ ಇವರು ರವಿವಾರ ಮುಂಡಗೋಡ ಮಾರ್ಗವಾಗಿ ಶಿಫ್ಟಕಾರಿನಲ್ಲಿ ಬೆಂಗಳೂರಗೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮೈಲುಗಲ್ಲಿಗೆ(ಮುಂಡಗೋಡ ೬ಕಿಮಿ ಬರೆದಿರುವ ಕಲ್ಲಿಗೆ) ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಮೂರ ನಾಲ್ಕು ಪಲ್ಟಿಹೊಡೆದಿದೆ ಎಂದು ಹೇಳಲಾಗಿದೆ. ಕಾರಿನಲ್ಲಿದ್ದ ಕಪೀಲದೇವಗೆ ತಲೆಗೆ ಭಾರಿ ಹೊಡೆತ ಬಿದ್ದಿರುವುದರಿಂದ ಆತ ಮೃತನಾಗಿದ್ದಾನೆ ಹಾಗೂ ಇತರರಿಗೂ ಕಾಲು ಕೈ, ಸೊಂಟಕ್ಕೆ ಕಣ್ಣಿಗೆ ಗಾಯವಾಗಿದೆ ಎಂದು ಹೇಳಲಾಗಿದೆ
ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ


 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...