ಯುವಪ್ರೇಮಿಗಳು ನೇಣಿಗೆ ಶರಣು ಕೊಳೆತ ಸ್ಥಿತಿಯಲ್ಲಿ ಶವಪತ್ತೆ

Source: sonews | By Staff Correspondent | Published on 22nd March 2018, 12:13 AM | Coastal News | Incidents | Don't Miss |

ಮುಂಡಗೋಡ : ಮುಂಡಗೋಡ  ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸಮಾಡುತ್ತಿದ್ದ ಯುವ ಪ್ರೇಮಿಗಳು ಕುಮಟಾ ತಾಲೂಕಿನ ಯಾಣ ಕ್ರಾಸ್ ನ ಅರಣ್ಯದಲ್ಲಿ ನೇಣುಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಆತ್ಮಹತ್ಯೆಗೆ ಶರಣಾದವರನ್ನು ಬಂಟ್ವಾಳ ಮೂಲದ ಹಾಲಿ ಮುಂಡಗೋಡ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಪ್ರಜ್ಞಾ ಪಿ.ಎಸ್. ಹಾಗೂ ಅದೇ ಶಾಲೆಯ ಶಿಕ್ಷಕ ಸಾಲಗಾಂವ ಗ್ರಾಮದ ವಿಠ್ಠಲ್ ಸುಬ್ಬಣ್ಣವರ ಎಂದು ಹೇಳಲಾಗುತ್ತಿದೆ.

ಯುವ  ಶಿಕ್ಷಕ ಪ್ರೇಮಿಗಳು ಮಾರ್ಚ್ 3 ರಂದು ನಾಪತ್ತೆಯಾಗಿದ್ದರು ಈ ಕುರಿತು ಶಿಕ್ಷಕಿಯ ತಾಯಿ ಮುಂಡಗೋಡ ಪೊಲೀಸ ಠಾಣೆಯಲ್ಲಿ ತಮ್ಮ ಮಗಳಿಗೆ ಶಿಕ್ಷಕ ವಿಠ್ಠಲ ಸುಬ್ಬಣ್ಣವರ ಜತೆ ಪ್ರೇಮ ಸಂಬಂದವಿತ್ತು ಎಂದು ಉಲ್ಲೇಖಿಸಿ ತಮ್ಮ ಮಗಳನ್ನು ಹುಡುಕಿಕೊಡಿ ಎಂದು  ದೂರು ದಾಖಲಿಸಿದ್ದರು.

ತಮ್ಮ ವಾಹನದ ಮೇಲೆ ನಿಂತು ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಹುಡುಗಿಯ ಶವ ಕೆಳಗೆ ಬಿದ್ದಿದೆ ಹುಡುಗನ ರುಂಡ್ ಮೇಲೆಯೆ ಇದೆ ಮುಂಡ ಕೆಳಗೆ ಬಿದ್ದಿದೆ.ಶವಗಳು ಕೊಳೆತ ಸ್ಥಿತಿ ನೋಡಿದರೆ  ನಾಪತ್ತೆಯಾದ ದಿನವೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.ಮೃತರ ಮನೆಗಳಿಗೆ  ಪೊಲೀಸರು ಸುದ್ದಿ ತಲುಪಿಸಿದ್ದಾರೆ 

ಘಟನೆ ಸಂಬಂದಿಸಿದಂತೆ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...