ವಿದ್ಯುತ್ ಅವಘಡದಿಂದ ವ್ಯಕ್ತಿ ಮೃತ
ಮುಂಡಗೋಡ : ಕುರಿಗೆ ಸೊಪ್ಪು(ಮೇವು) ತರಲು ಹೋಗಿದ್ದ ವ್ಯಕ್ತಿಯೋರ್ವ ವಿದ್ಯುತ್ ಅವಘಡದಿಂದ ಮೃತಪಟ್ಟ ಘಟನೆ ತಾಲೂಕಿನ ಪಾಳಾ ಗ್ರಾಮದ ಹೊಸನಗರದಲ್ಲಿ ಇಂದು ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಹೊಸನಗರ ನಿವಾಸಿ ಅಬ್ದುಲರೇಹಮಾನ ಬಕ್ಷುಸಾಬ ಬಾರವಾಲೆ(೫೪) ಎಂದು ಹೇಳಲಾಗಿದೆ
ಕುರಿಯ ಸಮೇತ ಮೇವು ತರಲು ಹೋಗಿದ್ದ ಅಬ್ದುಲ್ರೇಹಮಾನ ಗಿಡವನ್ನು ಹತ್ತಿ ಸೊಪ್ಪು ಹರಿದು ಕೆಳಗೆ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು. ಕುರಿಯು ಒಂದೇ ಮನೆಗೆ ಧಾವಿಸಿರುವುದರಿಂದ ಸಂಶಯಗೊಂಡ ಮನೆಯವರು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಕುರಿತು ಘಟನಾ ಸ್ಥಳಕ್ಕೆ ಪಿಎಸ್ಆಯ್ ಲಕ್ಕಪ್ಪ ನಾಯಕ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ