ಮುಂಡಗೋಡ : ಸೈಕಲ್ ಸವಾರಿನೆ ಕಾರ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ
ತಾಲೂಕಿನ ಮಳಗಿ ಹತ್ತಿರ ಮಂಗಳವಾರ ಸಂಜೆ ಸೈಕಲ್ಸವಾರಿನಿಗೆ ಇನೋವಾ ಕಾರೊಂದು ಡಿಕ್ಕಿ ಹೊಡದ ಪರಿಣಾಮದಿಂದ ಸೈಕಲ್ ಸವಾರ sಸಾವನ್ನಪ್ಪಿದ ಘಟನೆ ನಡೆದಿದೆ.
ಮಳಗಿ ಗ್ರಾಮದ ನಿವಾಸಿ ಆನಂದಪ್ಪ ಫಕ್ಕೀರಪ್ಪ ಹಾಳೂರು(೫೮), ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಂಗಳವಾರ ಸಂಜೆ ಹೊಲದ ಕೆಲಸಕ್ಕೆಂದು ಸೈಕಲ್ ಮೇಲೆ ಹೊರಟಿದ್ದ ಆನಂದಪ್ಪ ನಿಗೆ ಹುಬ್ಬಳ್ಳಿ ಯಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಇನ್ನೊವಾ ಕಾರ ಡಿಕ್ಕಿ ಹೊಡೆದಿದೆ.
ಗಾಯಳುನನ್ನು ತಕ್ಷಣ ಆಸ್ಪತ್ರೆಗೆ ಕರೆದ್ಯೊಯತ್ತಿರುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪಡಿಸಿದ ಇನೋವಾ ಕಾರ್ ಮತ್ತು ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.