ಡೊಣ್ಣ ಮೆಣಸಿಕಾಯಿ ಬೆಳೆ ರೈತನಿಗೆ ಲಾಭದಾಯಕ

Source: sonews | By Staff Correspondent | Published on 8th October 2017, 10:51 PM | Coastal News | State News | Special Report |

ಮುಂಡಗೋಡ ; ಆರ್ಥಿಕ ಸಂಕಷ್ಟದಲ್ಲಿರುವ ರೈತನಿಗೆ ಡೊಣ್ಣ ಮೆಣಸಿನಕಾಯಿ ಕೈ ಹಿಡಿಯುತ್ತದೆ ಎಂದು ಇಲ್ಲಿಯ ರೈತ ತೋರಿಸಿ ಆದಾಯ ಗಳಿಕೆಯಲ್ಲಿ ದಾಪುಗಾಲು ಇಟ್ಟಿದ್ದಾನೆ.  ಈ ಬೆಳೆಯು ಮಳೆಯಾಶ್ರಿತವಾಗದೇ ಕೇವಲ ಹನಿ ನೀರಾವರಿ ಮೇಲೆ ನಿಂತಿದೆ.
ಕಡಿಮೆ ವೆಚ್ಚದಲ್ಲಿ ೧೦ ಗುಂಟೆಜಾಗೆಯಲ್ಲಿ ಬೆಳೆ ಬೆಳೆದು ಲಕ್ಷಾಂತರ ರೂ ಗಳಿಸ ಬಹುದಾಗಿದೆ. ಹೆಚ್ಚು ಆದಾಯ ಗಳಿಸಬಲ್ಲ ದೊಣ್ಣ ಮೆಣಸಿನಕಾಯಿ(ಕ್ಯಾಪ್ಸಿಕಮ್) ಬೆಳೆ ರೈತರ ಕೈ ಹಿಡಿಯುವುದರಲ್ಲಿ ಸಂಶಯವಿಲ್ಲ. ಈ ಬೆಳೆಯಲ್ಲಿ ಬಣ್ಣದ ಕಾಯಿಗಳು ರೈತನಿಗೆ ಲಾಭದಾಯಕವಾಗಿ ಗೋಚರಿಸುತ್ತಿದೆ ಆರ್ಥಿಕ ಕಷ್ಟದಲ್ಲಿರುವ ರೈತರಿಗೆ ಕೈಹಿಡಿಯುವ  ಬೆಳೆಯಾಗಿ ಮಾರ್ಪಡಲ್ಪಟ್ಟಿದೆ.
ತಾಲೂಕಿನ ಕೊಪ್ಪ, ಇಂದೂರ, ಹಾಗೂ ನಾಗಿನಕೆರೆ(ಮಳಗಿ) ಯಲ್ಲಿ ನಾಲ್ವರು ರೈತರು ಡೊಣ್ಣ ಮೆಣಸಿನಕಾಯಿ   ಬೆಳೆದು ಬಣ್ಣದ ಬೆಳೆಗೆ ಜೀವ ತುಂಬುವ ಮೂಲಕ ಇತರ ರೈರಿಗೆ ಮಾದರಿಯಾಗಿದ್ದಾರೆ
ಪಾಲಿಹೌಸ್‌ನಲ್ಲಿ (ಹಸಿರು ಮನೆ) ಬೆಳೆದಿರುವ ಹಸಿರು, ಕೆಂಪು,  ಹಳದಿ ಬಣ್ಣದ ಡೊಣ್ಣ ಮೆಣಸಿನ ಕಾಯಿ ಗಿಡತುಂಬ ಫಸಲು ನೀಡಿವೆ. ಆರಂಭಿಕ ಲಾಭದಿಂದ ಖುಷಿಯಾಗಿರುವ ರೈತರು ಇತರೆ ರೈತರು ಈ ಬೆಳೆ ಬೆಳೆದು ಆರ್ಥಿಕಸಂಕಷ್ಟ ನೀಗಿಸಿಕೊಳ್ಳಲಿ ಎಂದು ಅವರಿಗೆ ಈ ಬೆಳೆ ಕುರಿತು ಮಾಹಿತಿ ನೀಡುತ್ತಿದ್ದಾರೆ.


ಪಾಲಿಹೌಸ್ ನಲ್ಲಿ ಬೆಳೆಯುವ ವಿಧಾನ ‘ಸುಮಾರು ೧೦ ಗುಂಟೆ ಜಾಗದಲ್ಲಿ ಮೂರು ಅಡಿ ಅಗಲದ ೧೬ ಬೆಡ್ ಗಳನ್ನು ( ಎತ್ತರದ ಮಣ್ಣಿನ ಸಾಲು) ನಿರ್ಮಿಸಲಾಗಿದೆ ಸಾಲಿನಲ್ಲಿರುವ ಮಣ್ಣನ್ನು ಸಡಿಲಗೊಳಿಸಿ, ಅಗತ್ಯ ಗೊಬ್ಬರ ಹಾಕಿ, ನೀರು ಪೂರೈಸಲು ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.ಅದರಲ್ಲಿ ೧೬ ಸೆಂಟಿಮೀಟರ್‌ಗೆ ಒಂದೊಂದರಂತೆ ನಾಟಿ ಮಡಿರುವ ೩೦೦೦ ದಷ್ಟು ಸಸಿಗಳು ೧೨-೧೩ ಅಡಿ ಎತ್ತರಕ್ಕೆ ಬೆಳೆದಿವೆ. ಸಸಿಗಳಿಗೆ ಅಗತ್ಯ  ಬೆಳಕು ಮತ್ತು ಗಾಳಿ ಸಿಗುವ ವ್ಯವಸ್ಥೆಯನ್ನು ಹಸಿರುವಮನೆ ಮಾಡುತ್ತದೆ’ ಎಂದು ಇಂದೂರಿನ ಕೃಷಿಕ ಯಮನಪ್ಪ ಮಾರಂಬೀಡ್ ಹೇಳುತ್ತಾರೆ
‘ಪುಣೆಯಿಂದ ೧೪ ರೂಪಾಯಿಗೆ ಒಂದರಂತೆ ಸಸಿಗಳನ್ನು ತರಲಾಗಿದೆ. ಹಸಿರು ಮನೆಯಲ್ಲಿ ನಾಟಿ ಮಡಿದ ೭೦ ದಿನಗಳಲ್ಲಿ ಕಾಯಿ ಬಿಡಲು ಆರಂಭವಾಗುತ್ತದೆ. ೯೦ ದಿನದಲ್ಲಿ ಕಾಯಿ ಕೊಯ್ಲು  ಮಾಡುವ ಹಂತಕ್ಕೆ ಬಂದು ಹಸಿರು, ಹಳದಿ ಹಾಗೂ ಕೆಂಪು ಬಣ್ಣದ ಡೊಣ್ಣ ಮೆಣಸಿನಕಾಯಿಗಳು ಗಿಡದ ತುಂಬ ಬಿಡುತ್ತವೆ’ ಎಂದು ಅವರು ತಿಳಿಸಿದರು
ಪ್ರತಿ ಗಿಡದಲ್ಲಿ ೩-೫ ಕೆ.ಜಿ ಕಾಯಿಗಳು ಸಿಗಲಿದ್ದು ಪ್ರತಿ ಕಾಯಿ ೨೫೦-೨೮೦ ಗ್ರಾ.ಂ ತೂಕ ಹೊಂದಿರುತ್ತವೆ. ಮುಂದಿನ ಐದು ತಿಂಗಳವರೆಗೆ ೮ ಟನ್ ಕ್ಯಾಪ್ಸಿಕಮ್ ಬೆಳೆ ಪಡೆದು ೮ ಲಕ್ಷ ದಿಂದ ೧೦ ಲಕ್ಷ ರೂ ಆದಾಯ ಗಳಿಸಬಹುದು. ಸದ್ಯ ಹಸಿರು ಕಾಯಿ ಪ್ರತಿಕೆಜಿಗೆ ೨೫ ರೂ ದಿಂದ ೩೦ ರೂಪಾಯಿ ಇದೆ. ಹಳದಿ ಮತ್ತು ಕೆಂಪು ಕಾಯಿಗಳು ಪ್ರತಿಕೆಜಿಗೆ ೮೦-೧೦೦ ರೂಪಾಯಿಗೆ ಮಾರಾಟವಾಗುತ್ತಿವೆ ಎಂದು ಮಾಹಿತಿ ನೀಡಿದರು.
ಹೋಟಲ್‌ಗಳಲ್ಲಿ ಹೆಚ್ಚಿನ ಬೇಡಿಕೆ: ಪ್ರತಿ ವಾರಕ್ಕೆ ೩ ರಿಂದ ೫ ಟನ್ ಕ್ಯಾಪ್ಸಿಕಮ್ ಬೆಳೆಯನ್ನು ಕಟಾವು ಮಾಡಲಾಗುತ್ತದೆ. ೨೦ ಕೆಜಿ ಡೊಣ್ಣ ಮೆಣಸಿಕಾಯಿ ಹಿಡಿಯುವಂತ ರಟ್ಟಿನ ಡಬ್ಬಿಯಲ್ಲಿ ಕಾಯಿಗಳನ್ನು ಪ್ಯಾಕ್ ಮಾಡಿ, ಹುಬ್ಬಳ್ಳಿ, ಮೂಲಕ ಹೈದರಾಬಾದ್, ಗೋವಾ, ಮುಂಬಯಿ ಹಾಗೂ ಬೆಳಗಾಂವಿ ಮಾರುಕಟ್ಟೆಗೆ ರೈತರು ಕಳುಹಿಸುತ್ತಾರೆ ಚೈನೀಸ್ ಹೊಟೇಲ್‌ಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ.
ಮೊದಲನೇ ವರ್ಷ ಪಾಲಿಹೌಸ್ ನಿರ್ಮಾಣ ಮಾಡಲು ಹಣ ಖರ್ಚುವಾಗುವು ಆದ್ದರಿಂದ ಮೊದಲನೇ ವರ್ಷದಲ್ಲಿ ರೈತನಿಗೆ ಅಷ್ಟು ಲಾಭ ಅಷ್ಟಕಷ್ಟೆ ಎನಿಸಿದರೂ ಮುಂದಿನ ವರ್ಷಗಳಲ್ಲಿ  ಅದೇ ಪಾಲಿಹೌಸ್ ನಲ್ಲಿ ದೊಣ್ಣನ ಮಣಸಿನಕಾಯಿ ಸಸಿ ನೆಟ್ಟು ಲಕ್ಷ ಲಕ್ಷ ಲಾಭ ಹೊಂದಬಹುದು.
ಈ ಯೋಜನೆಯಲ್ಲಿ ತೋಟಗಾರಿಕೆ ಇಲಾಖೆಗೆ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಹೆಚ್ಚಿನ ರೈತರು ಇದರ ಲಾಭಪಡೆಯಬಹುದಾಗಿದೆ
ತಾಲೂಕಿನಲ್ಲಿ ವರ್ಷದ ಹಿಂದೆಯಷ್ಟೆ ಕ್ಯಾಪ್ಸಿಕಮ್ ಬೆಳೆ ಪರಿಚಯಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಹಾಗೂ ಸಮಗ್ರ ತೋಟಗಾರಿಕಾ ಅಭಿವೃದ್ದಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು  ಪಂಗಡದ ರೈತರಿಗೆ ಪ್ರತಿ ಹತ್ತು ಗುಂಟೆಗೆ ೭.೫೯ ಲಕ್ಷ ಸಹಾಯಧನ ನೀಡಲಾಗಿದೆ . ಘಟಕ ನಿಮಾಣಕ್ಕೆ ಒಟ್ಟು ವೆಚ್ಚ ೧೧ ಲಕ್ಷ ವೆಚ್ಚವಾಗಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ಚಿತ್ರ ವರದಿ :ನಜೀರುದ್ದಿನ. ಎ. ತಾಡಪತ್ರಿ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...