ಮುಂಡಗೋಡ : ಪದ್ಮಾಂಬಾ ಪುಸ್ತಕ ಅಂಗಡಿಯ ಮಾಲಿಕ ಪುಟ್ಟಣ್ಣ ನಿಧನ
ಮುಂಡಗೋಡ: ಪಟ್ಟಣದ ಪದ್ಮಂಬಾ ಪುಸ್ತಕ ಅಂಗಡಿಯ ಮಾಲಿಕ ವೃಷಭರಾಜ(ಪುಟ್ಟಣ್ಣಾ) ಅಂಗಡಿ (55) ಕೊರೊನಾ ದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಪುಟ್ಟಣ್ಣ ಎಂದು ಚಿರಪರಿಚಿತರಾಗಿದ್ದರು ಅವರು ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು. ಅವರ ಸರಳ ಸಜ್ಜನಿಕೆಯಿಂದ ಅಪಾರ ಸ್ನೇಹಿತರನ್ನು ಹೊಂದಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರರನ್ನು ಸೇರಿದಂತೆ ಅಪಾರ ಬಂಧುಬಳಗ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಬಿಜೆಪಿ ಧುರಿಣರು ಕಾರ್ಯಕರ್ತರು ಸ್ನೇಹಿತರು ಕಂಬನಿ ಮಿಡಿದಿದ್ದಾರೆ