ಮುಂಡಗೋಡ: ಹೋರಿ  ಭಾರಿ ಜಬರದಸ್ತ ಐತಿ ಕೊರಳಿನ ಕೊಬ್ರಿಗೆ ಕೈ ಹಾಕಾಕ ಕೊಡಂಗಿಲ್ಲಾ ದಾರಿ ಬಿಡಿ

Source: nazir | By Arshad Koppa | Published on 22nd October 2017, 8:10 AM | Coastal News | Special Report |


ಮುಂಡಗೋಡ : ಏ ಹುಡುಗ್ರಾ ಹುಷಾರು ಈ  ಹೋರಿ  ಭಾರಿ ಜಬರದಸ್ತ ಐತಿ ಕೊರಳಿನ ಕೊಬ್ರಿಗೆ ಕೈ ಹಾಕಾಕ ಕೊಡಂಗಿಲ್ಲಾ, ದಾರಿ ಬಿಡಿ ನೋಡಿ ಹಿಡಿರಿ ಯಾರ್ ಕೊರಳಿನ ಕೊಬ್ರೀಗೆ ಕೈ ಹಾಕತಾರ ನೋಡುವ ಎಂದು ಸ್ವಲ್ಪ ಧ್ಯಾನಕೊಟ್ಟು ಕೇಳ್ರೀ ಈ ನಮ್ಮ ಹೋರಿಯನ್ನು ಯಾರ್ ಕೊರಳಿನ ಕೊಬ್ರಿ ಮುರಿದು ತಂದುಕೊಡುತ್ತಾರ ಅವರಿಗೆ ಸಾವಿರ ರೂ ಬಹುಮಾನ. ಸಾಹಸಿ ಯುವಕರನ್ನು ಹುರಿದುಂಬಿಸುವ ಕಾರ್ಯಕ್ರಮ ನಿರೂಪಣೆ ಮಾಡುವವನ ಮಾತು ಯುವಕರನ್ನು ಹುರಿದುಂಬಿಸಲಾಗುತ್ತಿತ್ತು.

ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹಳೂರ ಓಣಿಯಲ್ಲಿ ಶುಕ್ರವಾರ ಅಯೋಜಿಸಲಾಗಿದ್ದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಹೋರಿಗಳನ್ನು ಓಡಿಸುವಾಗ ಕೇಳಿಬಂದ ಶಬ್ದ. ಹೋರಿಗಳನ್ನು, ಎತ್ತುಗಳನ್ನು ಕೊರಳಿಗೆ ಕೊಬ್ರಿ ಮಾಲೆ, ಗಂಟೆಗಳ ಮಾಲೆ, ಕೊಂಬುಗಳಿಗೆ ವಿವಿಧ ನಮೂನೆ ಬಟ್ಟೆಗಳ ಚಿತ್ತಾರದಿಂದ, ಬಣ್ಣ ಬಣ್ಣದಿಂದ ಅಲಂಕರಿಸಿ, ವಿವಿಧ ನಮೂನೆಯ ಬಣ್ಣ ಬಣ್ಣದ ರಿಬ್ಬನ್ ಬಲೂನಗಳಿಂದ ಗಳಿಂದ ದೇಹದ ಕೆಲವು ಭಾಗಗಳಿಗೆ ಬಣ್ಣವನ್ನು ಲೇಪಿಸಿ ಶೃಂಗರಿಸಿ ದನಬೇದರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ದನಗಳನ್ನು ನೋಡುವುದೇ ಒಂದು ಭಾಗ್ಯ. ಶೃಂಗಾರಗೊಂಡ ದನಗಳು ಓಡುವುದನ್ನು ನೋಡುವುದು, ಅವುಗಳ ಕೊಬ್ರೀ, ಹಾಗೂ ಹೊರಿಯನ್ನು ಹಿಡಿಯಲು ಕೈ ಹಾಕುವ ಯುವ ಹಾಗೂ ಕೊಬ್ರೀ ಹರಿಯಲೆಂದೇ ಬೆನ್ನಟ್ಟುವ ಸಾಹಸಿಗರ ದೃಶ್ಯ ರೋಮಾಂಚನ ವೇನಿಸುತ್ತಿದೆ. ಕಣ್ಣು ಬಿಟ್ಟು ಕಣ್ಣು ತೆಗೆಯದೊರಳಗೆ ಸೂಂಯ್ ಎಂದು ಓಡುವ ಹೋರಿ ದಡ ಮುಟ್ಟಿಬಿಟ್ಟಿರುತ್ತದೆ. ದನ ಓಡುವಾಗ ಯಾರ್ ಸೀಗದೇ ಓಡುತ್ತಿರುವಾಗ ಸಹಾಸಿಗಳು ದನ ಹಿಡೆದೆ ಬಿಟ್ಟೇವು ಎನ್ನುವಂತೆ  ಹೂಯ್ ಹೂಯ್  ಎಂದು ಶಬ್ದ ಮಾಡುತ್ತಿರುವಾಗ ದನ ಎಲ್ಲರನ್ನೂ ಸಾಹಸಿಗಳನ್ನು  ಭೇದಿಸಿ ಹೋಗುವುದನ್ನು ನೋಡುವುದೇ ಒಂದು ರೊಮಾಂಚನದ ಹಬ್ಬ. ಹೋರಿ ಯಾರ್ ಕೈಗೂ ಸೀಗದೇ ಓಡಿದರೆ ಆ ಹೋರಿ ಮಾಲಿಕ ಆನಂದ ಭಾಷ್ಪ ಹಾಕಿ ತನ್ನ ಸಂಗಡಿಗರೊಂದಿಗೆ ಕೆಕೆ ಹಾಕುವುದು ಕುಣಿಯುವುದು ನೋಡಬಹುದಾಗಿದೆ. ನೂರಾರು  ಯುವಕರು ಕೊಬ್ಬರಿ ಹರಿಯಲು ನಿಂತಿದ್ದರೆ ಸಾವಿರಾರು ಜನರು ಹೋರಿ ಓಟ ಹಾಗೂ ಯುವಕರ ಸಾಹಸ  ಕಣ್ತುಂಬಿಕೊಳ್ಳಲು  ಎರಡು ಬದಿಗಳಲ್ಲಿ ಮನೆಗಳ ಮಾಳಿಗೆಯಲ್ಲಿ ನೆರೆದಿದ್ದರು. ನ್ಯಾಸರ್ಗಿ ಮುತ್ತು, ಮುಂಡಗೋಡ ಕಿಂಗ್ , ಅಂದಾನಿ, 108 ಸೇರಿದಂತೆ ಹಲವು ಹೆಸರುಗಳಿಂದ ಗುರುತಿಸಿ ಕೊಂಡಿದ್ದ ಹೋರಿಗಳು ಒಂದಕ್ಕಿಂತ ಒಂದು ಶರವೇಗದಲ್ಲಿ ಓಡುತ್ತಿದ್ದವು.
ಪ್ರತಿವರ್ಷ ದೀಪಾವಳಿ ಹಬ್ಬದಲ್ಲಿ  ದನ ಬೆದರಿಸುವ ಕಾರ್ಯ ನಡೆಯುತ್ತಿದೆ. ರೈತರು ಖುಷಿಯಿಂದ ಕಾರ್ಯಕ್ರಮ ದಲ್ಲಿ ಪಾಲ್ಗೋಳತ್ತಾರೆ. ರೈತರ ಪಾಲಿಗೆ ಸಂತಸದ ಹಬ್ಬವಾಗಿದ್ದು. ಅವರವರ ಹೋರಿ ಗೆದ್ದಾಗ ಗೆದ್ದಂತೆ ರೈತರು ಸಂಭ್ರಮಿಸುತ್ತಾರೆ ಇಂತಹ ಸಂಭ್ರಮ ನೋಡುವುದು ಈ ಹೋರಿ ಬೇದರಿಸುವ ಹಬ್ಬದಲ್ಲಿ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರಿಂದ ಹೇಳುತ್ತಿರುವ ಮಾತು
ಜನಪದ ಕ್ರೀಡೆಗಳಲ್ಲಿ  ಒಂದಾದ ಹೋರಿಬೇದರಿಸುವ ಕ್ರೀಡೆ ಗ್ರಾಮಾಂತರ ಕ್ರೀಡೆಯಾಗಿದ್ದು ಈ ಬಯಲು ಸೀಮೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಹಬ್ಬ ಮುಂಡಗೋಡ ನಲ್ಲಿ ಪ್ರತಿ ದೀಪಾವಳಿಯ ಹಬ್ಬದ ಪಾಡ್ಯ ಹಬ್ಬದ ದಿನದೊಂದು ದನಬೇದರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ತಾಲೂಕಿನ ಪಾಳಾ ಗ್ರಾಮದಲ್ಲಿ ರಾಜ್ಯಮಟ್ಟದ ದನಬೇದರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದನಬೇದರಿಸುವ ಹಳ್ಳಿ ಕ್ರೀಡೆ ಮುಂಡಗೋಡ ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಸಾಗಿದೆ
ಚಿತ್ರ ಮತ್ತು ವರದಿ : ನಝೀರುದ್ದಿನ ಎ. ತಾಡಪತ್ರಿ

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...