ಮುಂಡಗೋಡ : ಮೋಟಾರ ಬೈಕ್ ಮೇಲೆ ಬಂದು ನಗ ನಾಣ್ಯ ಎಗರಿಸಿಕೊಂಡ ಹೋದ ಘಟನೆ ತಾಲೂಕಿನ ಹುಬ್ಬಳ್ಳಿ ಶಿರಸಿ ರಸ್ತೆಯ ಗೊಟಗೋಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಇಂದೂರ(ಕೊಪ್ಪ) ಗ್ರಾಮದ ಶಿವಾನಂದ ಭೋವಿವಡ್ಡರ ತಮ್ಮ ಹೆಂಡತಿ ಮಗನೊಂದಿಗೆ ಹುಬ್ಬಳ್ಳಿ ಶಿರಸಿ ರಸ್ತೆಯ ಮಳಗಿ ಮಾರ್ಗವಾಗಿ ಬರುತ್ತಿದ್ದಾಗ ಗೊಟಗೋಡಿ-ಕಲಕೊಪ್ಪ ಗ್ರಾಮದ ಮಧ್ಯದ ರಸ್ತೆಯಲ್ಲಿ ಯಾರೊ ಆರೋಪಿತರು ಹಿಂದಿನಿಂದ ಮೋಟಾರ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಹೆಂಡತಿ ಬಗಲಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗ ಕಸಿದುಕೊಂಡು ಅದರಲ್ಲಿದ್ದ 7000ರೂ ನಗದು ಸುಮಾರು 4000 ರೂ ಮೌಲ್ಯದ ಮೊಬೈಲ್ ಫೋನ್ ಹಾಗೂ ಮಗನ ಕೈಯಲ್ಲಿದ್ದ ಸುಮಾರು 800 ರೂ ಬೆಲೆಬಾಳುವ ಕೈಗಡಗ ದೂಚಿಕೊಂಡು ಹೋಗಿದ್ದಾರೆ. ಈ ಕುರಿತು ಶಿವಾನಂದ ಭೋವಿವಡ್ಡರ ದೂರು ನೀಡಿದ್ದಾರೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.