ವಿಜಯಪುರ: ಆಕಳ ಕರುವೊಂದು ನೀರು ಕುಡಿಯಲು ಬಾವಿಯ ಬಳಿ ಹೋಗಿ ನೀರಿಗೆ ಬಿದ್ದು ಒದ್ದಾಡುತ್ತಿರುವುದನ್ನು ಅರಿತ ವೃದ್ಧರೊಬ್ಬರು ತನ್ನ ಜೀವದ ಹಂಗು ತೊರೆದು ಆಕಳು ಕರುವನ್ನು ರಕ್ಷಿಸಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಮುಹಮ್ಮದ್ ಇಸಾಕ್ ಮುತವಲ್ಲಿ (82) ಕರುವನ್ನು ರಕ್ಷಿಸಿದವರು.
ವಿಜಯಪುರ ನಗರದ ಖಾಝಿ ಲೇಔಟ್ನಲ್ಲಿರುವ ಹಾಳು ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಆಕಳ ಕರುವನ್ನು ತನ್ನ ಜೀವದ ಹಂಗು ತೊರೆದು ಕಟ್ಟಿಗೆ ಹಾಗೂ ಹಗ್ಗದ ಸಹಾಯದಿಂದ ರಕ್ಷಣೆ ಮಾಡಿ ಅವರು ಮಾನವೀಯತೆ ಮೆರೆದಿದ್ದಾರೆ. ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದೆ ಆಕಳ ಕರು ಬಾವಿಯಲ್ಲಿ ಬಿದ್ದು ನರಳುತ್ತಿರುವಾಗ ನಾನು ಮತ್ತು ನನ್ನ ಮಗ ಹಂಝಾ ಹುಸೈನ್ ಸೇರಿ ಬಾವಿಗೆ ಇಳಿದು ಕರುವನ್ನು ರಕ್ಷಿಸಿದ್ದೇವೆ
-ಮಹಮ್ಮದ್ ಇಸಾಕ್ ಮುತವಲ್ಲಿ