ಮುಂಡಗೋಡ: ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಲೂಕಿನ ಬೆಡಸಗಾಂವ ಗ್ರಾ.ಪಂ ವ್ಯಾಪ್ತಿಯ ಶ್ಯಾನವಳ್ಳಿಯಲ್ಲಿ ಮಧುಕರ ಗಣಪತಿ ಭಟ್(೪೦,) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.
ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಕೈ ಕೊಟ್ಟಿದಕ್ಕೆ ಹಾಗೂ ತನ್ನ ಹೊಲದಲ್ಲಿ ೯ ಬಾರಿ ಬೊರವೇಲ್ ಕೊರೆಸಿದರು ನೀರು ಬಾರದೇ ಇರುವದನ್ನು ಬೋರ್ ಗೆ ಮಾಡಿದ ಸಾಲ ಮಾಡಿದನ್ನೂ ಮನಸ್ಸಿಗೆ ಹಚ್ಚಿಕೊಂಡು ತನ್ನ ಗ್ರಾಮ ಹತ್ತಿರದ ಕಾಡಿನಲ್ಲಿ ಯಾವುದೋ ಕ್ರಿಮಿನಾಶಕ ವಿಷ ಸೇವಿಸಿ. ತನ್ನ ಕುಟುಂಬದವರಿಗೆ ಕರೆ ಮಾಡಿ ನಾನು ವಿಷ ಸೇವಿಸಿದ್ದು, ನನ್ನ ಶವ ನಮ್ಮ ಗ್ರಾಮದ ಕಾಡಿನಲ್ಲಿ ಇರುತ್ತೆ ಎಂದು ಹೇಳಿದ್ದಾನೆ ಎಂದು ಹೇಳಲಾಗಿದೆ. ಕರೆ ಮಾಡಿದ ಹಿನ್ನಲೆಯಲ್ಲಿ ಈತನನ್ನು ಹುಡಕಲು ಕುಟುಂಬದವರು ಕಾಡಿಗೆ ಹೋಗಿದ್ದಾರೆ ಕಾಡಿನಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡ ಈತನನ್ನು ಆಸ್ಪತ್ರೆಗೆಂದು ಕರೆದ್ಯೊಯತ್ತಿರುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.