ಶಿರಸಿ : ಕಾರವಾರದ ಹಿಂದಿನ ಶಾಸಕ ವಸಂತ ಅಸ್ನೋಟಿಕರ್ ಹತ್ಯೆ ಪ್ರಕರಣದಲ್ಲಿ ಆತೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ವೀರಪ್ಪ ಅವರು ಆದೇಶ ನೀಡಿದ್ದಾರೆ. 19- 02-2000ರಂದು ಆಗಿನ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ತಮ್ಮ ಮಗಳ ಮದುವೆ ತಯಾರಿಯಲ್ಲಿದ್ದರು. ಕಾರವಾರದ ದೈವಜ್ಞ ಕಲ್ಯಾಣ ಮಂಟಪದ ಎದುರು ಇದ್ದ ವೇಳೆ ಬೈಕ್ ಮೇಲೆ ಬಂದ ಆಗುಂತಕರು ಗುಂಡು ಹಾರಿಸಿ ಹತ್ಯೆ ಗೈದಿದ್ದರು.
ಈ ಸಂಬಂಧ ರಾಜನ್ ಅಲಿಯಾಸ ಸಂಜಯ ಮೋಹಿತೆ ಎಂಬಾತ ಕೊಲೆ ಪ್ರಮುಖ ಆರೋಪಿ ಎಂದು ಬಂಧಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ
ಜೀವಾವಧಿ ಶಿಕ್ಷೆ ಜೊತೆಗೆ 68.000ರೂ. ದಂಡ ವಿಧಿಸಿದೆ.
ಪ್ರಕರಣ ಕಾರವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಶಿರಸಿಯ 01ನೇ ಅಧಿಕ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಸರಕಾರದ ಪರವಾಗಿ ಸುನಂದಾ ಮಡಿವಾಳಕರ್ ವಾದ ಮಂಡಿಸಿದ್ದರು.