ಕಾರವಾರ : ನಮ್ಮ ತಂಟೆಗೆ ಬಂದರೆ ಖಂಡಿತ ಸುಮ್ಮನೆ ಬಿಡಲ್ಲ ಎಂದು ಮಹಾರಾಷ್ಟ್ರ ಸಿಎಂಗೆ ಉತ್ತರಕನ್ನಡ ಜಿಲ್ಲೆಯ ಕಾರವಾರ ಶಾಸಕಿ ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಭವ ಠಾಕ್ರೆ ಪದೇಪದೇ ಗಡಿ ಖ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ಕನ್ನಡಿಗರ ಭಾವನೆ ಕೆರಳಿಸುತ್ತಿರುವುದಕ್ಕೆ ರೂಪಾಲಿ ಖಂಡಿಸಿದ್ದಾರೆ.
ಕಾರವಾರ, ಬೆಳಗಾವಿ ಸೇರಿ ಕರ್ನಾಟಕದ ಗಡಿ ಜಿಲ್ಲೆಗಳನ್ನ ಹರಾಜಿಗಿಟ್ಟಿಲ್ಲ. ನಿಮಗೆ ಮಾಡಲು ಕೆಲಸ ಬೇಕಾದಷ್ಟಿದೆ. ಸಿಎಂ ಆಗಿದ್ದೀರಾ. ನಿಮ್ಮ ಜನರ ವಿಶ್ವಾಸ ತೆಗೆದುಕೊಂಡು ಅಲ್ಲಿನ ಕೆಲಸವನ್ನ ಮೊದಲು ಮಾಡಿಕೊಳ್ಳಿ. ಅದನ್ನ ಬಿಟ್ಟು ಪದೇ ಪದೇ ಗಡಿ ವಿವಾದ ತೆಗೆಯಬೇಡಿ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನಿಮಗೆ ತಕ್ಕ ಉತ್ತರ ನೀಡ್ತಾರೆ ಎಂದು ರೂಪಾಲಿಹೇಳಿದ್ದಾರೆ.