ಮುಂಡಗೋಡ : ಮೀನು ಹಿಡಿಯಲು ಹೋಗಿ ವ್ಯಕ್ತಿನೋರ್ವ ಮೃತಪಟ್ಟ ಘಟನೆ ತಾಲೂಕಿನ ಸಿಂಗನ್ನಳ್ಳಿ ಗ್ರಾಮದ ಸಿಂಗ್ನಳ್ಳಿ ಜಲಾಶಯದಲ್ಲಿ ಜರುಗಿದೆ.
ಮೃತಪಟ್ಟ ವ್ಯಕ್ತಿಯನ್ನು ತಾಲೂಕಿನ ಹಿರಳ್ಳಿ ಗ್ರಾಮದ ಪೀರಪ್ಪ ಫಕ್ಕಿರಪ್ಪ ಓಣಿಕೇರಿ(33) ಎಂದು ಗುರುತಿಸಲಾಗಿದೆ. ಐದು ಸ್ನೇಹಿತರಜತೆಗೂಡಿ ಗುರುವಾರ ರಾತ್ರಿ ಮೀನು ಹೀಡಿಯಲು ಸಿಂಗ್ನಳ್ಳಿ ಜಲಾಶಯಕ್ಕೆ ತೆರಳಿದ್ದಾನೆ. ಜಲಾಶಯದಲ್ಲಿ ಮೋದಲಿಗೆ ಪಿರಪ್ಪ ಇಳಿದಿದ್ದಾನೆ ಮೇಲೆ ಬರದೇ ಇರುವುದರಿಂದ ಪಿರಪ್ಪನಿಗಾಗಿ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ ಪೀರಪ್ಪ ಸಿಗದೇ ಇದ್ದಾಗ ತಡರಾತ್ರಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಜಲಾಶಯವು ಹೆಚ್ಚು ಆಳ ಇರುವುದರಿಂದ ಮೃತದೇಹ ಪತ್ತೆಹಚ್ಚಲು ವಿಳಂಬವಾಗಿ ಶುಕ್ರವಾರ ಸಂಜೆ ಮೃತದೇಹ ಪತ್ತೆಯಾಗಿದೆ ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.