ಭಟ್ಕಳದಲ್ಲಿ ವೃದ್ಧರೊಬ್ಬರ ಆತ್ಮಹತ್ಯೆ
ಭಟ್ಕಳ: ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಗೋಳಿಬೀಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಗುರುವಾರ ಪತ್ತೆಯಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ತಾಲೂಕಿನ ಯಲಡಿಕವೂರು ಗ್ರಾ.ಪಂ. ಬಿಟ್ಟಿಬೀಳೂರು ನಿವಾಸಿ ಸೋಮಯ್ಯ ನಾರಾಯಣ ನಾಯ್ಕ (63) ಕೊಲ್ಲೂರಿಮನೆ ಎಂದು ಗುರುತಿಸಲಾಗಿದ್ದು, ಮೃತರು ಧರಿಸಿದ್ದ ಲುಂಗಿಯನ್ನೇ ನೇಣನ್ನಾಗಿ ಮಾಡಿಕೊ೦ಡಿರುವುದು ಕಂಡು ಬಂದಿದೆ.
ಹೊಳೆಗೆ ಸೋಮಯ್ಯ ವಾಪಸ್ಸು ಬಾರದೇ ಇದ್ದಾಗ ಹುಡುಕಲು ಹೋದ ಅವರ ಕುಟುಂಬ ಸದಸ್ಯರೋರ್ವರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವವನ್ನು ಕಂಡು ಉಳಿದವರಿಗೆ ಮಾಹಿತಿ ನೀಡಿದ್ದಾರೆ. ಮೃತರು ಹೆಂಡತಿ ಹಾಗೂ ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಐ ಭರತ್ ತನಿಖೆ ಕೈಗೊಂಡಿದ್ದಾರೆ.