ಗೋಕರ್ಣ : ಗೋಕರ್ಣದ ತಾರಮಕ್ಕಿ ಮೂಲದ ಯುವಕನೋರ್ವನನ್ನ ಪೊಲೀಸರು ಬಂಧಿಸಿದ್ದಾರೆ.
ಶಂಕರ ಕೃಷ್ಣಾ ಗೌಡ (20) ಬಂಧಿತನಾಗಿದ್ದಾನೆ.
ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ಈತ ಗಾಂಜಾ ಮಾರುತ್ತಿರುವ ಗೋಕರ್ಣಮಾಹಿತಿ ಕಲೆ ಹಾಕಿದ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1ಕೆಜಿ 700 ಗ್ರಾಂ ಗಾಂಜಾವನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಈತನಿಂದ 1170 ರೂಪಾಯಿ ಹಣ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಗೋಕರ್ಣ ಪಿಎಸ್ಐ ನವೀನ ನಾಯ್ಕ ನೇತ್ರತ್ವದಲ್ಲಿ ದಾಳಿನಡೆಸಲಾಗಿತ್ತು. ಆರೋಪಿತನನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.