ಅಕ್ರಮವಾಗಿ ಗಾಂಜಾ ಮಾರಾಟ ಯತ್ನ:ಆರೋಪಿ ಬಂಧನ

Source: so news | By MV Bhatkal | Published on 18th April 2021, 6:56 AM | Coastal News |

ಭಟ್ಕಳ:ಪಟ್ಟಣದ ಗುಳ್ಮಿ ಕ್ರಾಸ್ ಬಳಿಯಲ್ಲಿ ಅಕ್ರಮವಾಗಿ ಒಣಗಿದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನ್ನು ಶನಿವಾರ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಗುಳ್ಮಿ ನಿವಾಸಿ ವೃತ್ತಿಯಲ್ಲಿ ಅಟೋ ಚಾಲಕ  ಅಕ್ರಂ ಹುಸೇನ್ ಸೈಯದ್ ಬಂಧಿತ ಆರೋಪಿ. ಇತನು ಸುಮಾರು ೧ಸಾವಿರ ಮೌಲ್ಯದ ಒಣಗಿದ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನಿದ ೨೦೦ರೂ ನಗದನ್ನು ಕೂಡ ಜಫ್ತು ಮಾಡಲಾಗಿದೆ.ಗ್ರಾಮೀಣ ಠಾಣಾ ಪಿಎಸ್‌ಐ ಭರತ ಕುಮಾರ ತನಿಖೆ ಮುಂದುವರೆಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...