ಮಹಿಳೆಯೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯ ಬಂಧನ
ಯಲ್ಲಾಪುರ: ಕ್ಷುಲ್ಲಕ ಕಾರಣಕ್ಕೆ ಮಹಿಳೆ ಹಾಗೂ ವ್ಯಕ್ತಿಯೋರ್ವನ ಮೇಲೆ ಇನ್ನೋರ್ವ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಗುಳ್ಳಾಪುರದಲ್ಲಿ ಇತ್ತೀಚಿಗೆ ನಡೆದಿದೆ. ಹಲ್ಲೆ ಮಾಡಿರುವ ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ
ದೀಕ್ಷಿತಾ ಗುಳ್ಳಾಪುರ ಅವರ ಹೊಟೇಲಿನಲ್ಲಿ ಸೋಡಾ ವಿಷಯಕ್ಕೆ ಸಂಬಂಧಿಸಿದಂತೆ ಗುಳ್ಳಾಪುರ ಚಿಕ್ಕುಮನೆ ನಿವಾಸಿ, ಶಾಹಿಲ್ ಹಮೀದ ಶೇಖ್ ಎಂಬಾತ ತಗಾದೆ ತೆಗೆದಿದ್ದಾನೆ. ಅಲ್ಲದೇ, ಅವಾಚ್ಯ ಶಬ್ದದಿಂದ ಮಹಿಳೆಯನ್ನು ನಿಂದಿಸಿ, ಸೋಡಾ ಬಾಟಲಿಯಿಂದ ಅಲ್ಲಿಯೇ ಇದ್ದ ಗುಳ್ಳಾಪುರ ಕೊಡ್ಲಗದ್ದೆಯ ನಿವಾಸಿ, ಚಂದ್ರಕಾಂತ ನಾಗಪ್ಪ ನಾಯ್ಕ ಎನ್ನುವವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿ ಚಂದ್ರಕಾಂತ ನಾಯ್ಕ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಹೊಟೇಲ್ ಮಾಲಕಿ ದೀಕ್ಷಿತಾ ಕೂಡ ಗಾಯಗೊಂಡಿದ್ದಾಳೆ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.