ಪದವಿ ಕಾಲೇಜಿನ ಸಮಸ್ಯೆ ಆಲಿಸಿದ ಶಾಸಕ ಹೆಬ್ಬಾರ

Source: so news | By MV Bhatkal | Published on 22nd June 2019, 8:07 PM | Coastal News | Don't Miss |

ಮುಂಡಗೋಡ ; ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಶನಿವಾರ ಸಂಜೆ ಪಟ್ಟಣದ ಸರಕಾರಿ  ಪ್ರಥಮ ದರ್ಜೆ ಪದವಿ ವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜಿನ ಸ್ಥಿತಿಗತಿ ವಿಚಾರಿಸಿದರು. ಪ್ರೀನ್ಸಿಪಾಲ ಇಂದಿರಾ ಬಾಗಲಕೋಟೆ ಕಾಲೇಜಿನ ಕುಂದುಕೊರತೆಗಳ  ಕುರಿತು ಶಾಸಕರಿಗೆ ಮನವರಿಕೆ ಮಾಡಿದರು ಸಮಸ್ಯೆಗಳನ್ನು ಆಲಿಸಿದ ಶಾಸಕರು ವಿದ್ಯಾಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಶಾಸಕರ ನಿಧಿಯಲ್ಲಿ ಈ ಮೊದಲು ನೀಡಿದ 3 ಲಕ್ಷ ರೂ ಹಾಗೂ ಮತ್ತೆ 4 ಲಕ್ಷ ರೂ ಗಳನ್ನು ನೀಡುವುದಾಗಿ ಹೇಳಿದ್ದಾರೆ. ಈ ವಿದ್ಯಾಲಯಕ್ಕೆ ನಾನು ಅಧ್ಯಕ್ಷರಾಗಿರುವುದರಿಂದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನನ್ನ ಗಮನಕ್ಕೆ ತರಬೇಕು ಎಂದು ಪ್ರೀನ್ಸಿಪಾಲರಿಗೆ ಹೇಳಿದರು
ಇದೇ ಸಮಯದಲ್ಲಿ ಪಾಳಾದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಭಟ್ಟ  ತಮ್ಮ ವಸತಿ ಶಾಲೆಯ ಸಮಸ್ಯವನ್ನು ಶಾಸಕರ ಮುಂದಿಟ್ಟರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವಿಗೌಡಾ ಪಾಟೀಲ, ಪ.ಪಂ ಸದಸ್ಯ ರಜಾಖಾನ ಪಠಾಣ, ತಾ.ಪಂ ಸದಸ್ಯ ಗಣಪತಿ ವಡ್ಡರ, ಮಂಜುನಾಥ ಕಟಗಿ. ಸಂಜು ಪಿಶೆ, ಅಶೋಕ ಸೂರಣ್ಣವರ ಫಕ್ಕಿರಪ್ಪ ಗುಲ್ಯಾನವರ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...