ಭಟ್ಕಳ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘ,(ಬಿಎಸ್ಎನ್ಡಿಪಿ)ಬೆಂಗಳೂರು, ಇದರ ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಪಧಾದಿಕಾರಿಗಳ ಪಟ್ಟಿಯನ್ನು
ಬಿ.ಎಸ್.ಎನ್.ಡಿ.ಪಿ. ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್ ಭಟ್ಕಳದಲ್ಲಿ ಬಿಡುಗಡೆ ಮಾಡಿದರು.
ಹೊನ್ನಾವರ ಬಿಎಸ್ಎನ್ಡಿಪಿ ತಾಲೂಕು ಅಧ್ಯಕ್ಷರನ್ನಾಗಿ ಧನಂಜಯ ನಾಯ್ಕ ರಾಯಲ್ಕೇರಿ, ಕಾರ್ಯದರ್ಶಿಯನ್ನಾಗಿ ಸಂತೋಷ ನಾಯ್ಕ ಗೇರುಸೊಪ್ಪ ಹಾಗೂ ಭಟ್ಕಳದ ತಾಲೂಕು ಅಧ್ಯಕ್ಷರನ್ನಾಗಿ ಮನಮೋಹನ ನಾಯ್ಕ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಎಸ್ಎನ್ಡಿಪಿ ಸಂಚಾಲಕ ಶ್ರೀನಿವಾಸ ನಾಯ್ಕ ಶಿರಸಿ, ಬಿಎಸ್ಎನ್ಡಿಪಿ ರಾಜ್ಯ ಉಪಾಧ್ಯಕ್ಷ ಸಂತೋಷ ಕೋಟ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾಧ್ಯಕ್ಷ ಜಗದೀಶ ನಾಯ್ಕ ಸಿರಸಿ, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯ್ಕ
ಉಪಸ್ಥಿತರಿದ್ದರು.