ತಲಾಂದ ಗುಡ್ಡದಲ್ಲಿ ಚಿರತೆ ಶವ ಪತ್ತೆ

Source: SO NEWS | By MV Bhatkal | Published on 23rd August 2021, 6:45 AM | Coastal News |

ಭಟ್ಕಳ:ಪಟ್ಟಣದ ತಲಾಂದ ಗ್ರಾಮ ಸ.ನಂ ೧೯೩ರಲ್ಲಿ ಮೃತಪಟ್ಟ ಚಿರತೆ ಪತ್ತೆಯಾಗಿದೆ.
ತಲಾಂದನ ಸ್ಥಳೀಯ ವ್ಯಕ್ತಿಯೊರ್ವರು ಭಾನುವಾರ ಅರಣ್ಯ ಇಲಾಖೆಯ ಕಚೇರಿಗೆ ತೆರಳಿ ಚಿರತೆಯೊಂದು ಮೃತಪಟ್ಟಿರುವದಾಗಿ ಮಾಹಿತಿ ನೀಡಿದ್ದರು.ತಕ್ಷಣ ಭಟ್ಕಳ ಉಪವಲಯ ಅರಣ್ಯಾಧಿಕಾರಿ ಸಂದೀಪ ಭಂಡಾರಿ ಸಿಬ್ಬಂದಿಯೊದಿಗೆ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಅಲ್ಲಿ ಮೃತಪಟ್ಟ ಚಿರತೆ ಪತ್ತೆಯಾಗಿದೆ.ಮೇಲ್ನೋಟಕ್ಕೆ ಚಿರತೆಯ ಕುತ್ತಿಗೆಯ ಭಾಗಕ್ಕೆ ಗಾಯದ ಗುರುತು ಕಂಡು ಬಂದಿದೆ.ಒಂದು ವರ್ಷದ ಒಳಗಿನ ಹೆಣ್ಣು ಚಿರತೆ ಮರಿ ಅದಾಗಿದ್ದು,ಕೆಲವು ಗಂಟೆಗಳ ಹಿಂದೆ ಮೃತಪಟ್ಟಿರಬಹುದು ಎಂದು ಅಂದಾಗಿಸಲಾಗಿದೆ.ಪಶು ವೈದ್ಯರು ಬಂದು ಮರಣೋತ್ತರ ಪರೀಕ್ಷೇ ನಡೆಸಿ ಬಳಿಕ ಚಿರತೆಯ ಸಾವಿನ ನಿಖರ ಕಾರಣ ತಿಳಿದು ಬರಲಿದೆ. ಈ ಕುರಿತು ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದ್ದು ತನಿಖಾಧಿಕಾರಿ ಎಸಿಎಫ್ ಸುದರ್ಶನ್ ಜಿ.ಕೆ ಮುಂದಿನ ತನಿಖೆ ಕೈಗೊಂಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...