ಭಟ್ಕಳ : ಕೋವಿಡ್ ಕಾರಣಕ್ಕೆ ಬಂದಾಗಿದ್ದ ಸಾರಿಗೆ ಬಸ್ ನ್ನ ಮೊದಲಿನಂತೆಯೇ ಸಮಯಕ್ಕೆ ಸರಿಯಾಗಿ ಹೆಚ್ಚಿನ ಬಸ್ನ್ನು ಒದಗಿಸುವಂತೆ ಸಾಹಿಲ್ ಯುಥ್ ಅಸೋಸಿಯೇಷನ್ ಮನವಿ ಮಾಡಿದೆ.
ಭಟ್ಕಳ ಬಸ್ ಡಿಪೋ ಮ್ಯಾನೇಜರ್ ಗೆ ಮನವಿ ನೀಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. ನಮ್ಮ ಊರಿಗೆ ಈ ಮೊದಲು ಒಂದು ದಿನಕ್ಕೆ 10 ಬಸ್ಸುಗಳನ್ನು ಬಿಡುತ್ತಿದ್ದೀರಿ. ಆದರೆ ಕೋವಿಡ್-19 ನಂತರ ಈಗ ದಿನಕ್ಕೆ 2 ಬಸ್ಸುಗಳನ್ನು ಮಾತ್ರ ಬಿಡುತ್ತಿದ್ದೀರಿ. ಹೀಗಾಗಿ ನಮ್ಮ ಊರಿನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಭಟ್ಕಳ ಮತ್ತು ಮುಂಡಳ್ಳಿ, ನಸ್ತಾರಗೆ ಹೋಗುವ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ಬಸ್ಗಳನ್ನ ಬಿಡುವಂತೆ ತಿಳಿಸಿದ್ದಾರೆ
ಕೋವಿಡ್ ಆರಂಭವಾಗುವುದಕ್ಕಿಂತ ಮೊದಲು ಯಾವ ರೀತಿ ಸಮಯಕ್ಕೆ ಸರಿಯಾಗಿ ಅಂದರೆ ದಿನಕ್ಕೆ 10 ಬಸ್ಸುಗಳನ್ನು ಬಿಡುತ್ತಿದ್ದೀರೊ ಅದೇ ರೀತಿ ಬಸ್ಸುಗಳನ್ನು ಬಿಟ್ಟು ಊರ ಜನರಿಗೆ ಆಗುವ ತೊಂದರೆಯನ್ನು ಸರಿಪಡಿಸಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ..
ಈ ಸಂದರ್ಭದಲ್ಲಿ ಇನಾಯತುಲ್ಲಾ ಶಾಬಾಂದ್ರಿ, ಸಾಹಿಲ್ ಅಸೋಸಿಯೇಷನ್ ಅಧ್ಯಕ್ಷ ಲಯಿಕ್ ರುಕ್ನುದ್ದೀನ್ , ಕಾರ್ಯದರ್ಶಿ ಅಮ್ಮರ್ ಉಪಸ್ಥಿತರಿದ್ದರು.