ಮುಂಡಳ್ಳಿಗೆ ಮೊದಲಿನಂತೆ ಬಸ್ ಬಿಡಿ : ನಾಗರಿಕರ ಆಗ್ರಹ.

Source: SO News | By Laxmi Tanaya | Published on 9th October 2021, 11:17 PM | Coastal News | Don't Miss |

ಭಟ್ಕಳ : ಕೋವಿಡ್ ಕಾರಣಕ್ಕೆ ಬಂದಾಗಿದ್ದ ಸಾರಿಗೆ ಬಸ್ ನ್ನ ಮೊದಲಿನಂತೆಯೇ  ಸಮಯಕ್ಕೆ ಸರಿಯಾಗಿ ಹೆಚ್ಚಿನ ಬಸ್‌ನ್ನು ಒದಗಿಸುವಂತೆ ಸಾಹಿಲ್ ಯುಥ್ ಅಸೋಸಿಯೇಷನ್ ಮನವಿ ಮಾಡಿದೆ.

ಭಟ್ಕಳ ಬಸ್ ಡಿಪೋ ಮ್ಯಾನೇಜರ್ ಗೆ ಮನವಿ ನೀಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.  ನಮ್ಮ ಊರಿಗೆ ಈ ಮೊದಲು ಒಂದು ದಿನಕ್ಕೆ 10 ಬಸ್ಸುಗಳನ್ನು ಬಿಡುತ್ತಿದ್ದೀರಿ. ಆದರೆ ಕೋವಿಡ್-19 ನಂತರ ಈಗ ದಿನಕ್ಕೆ 2 ಬಸ್ಸುಗಳನ್ನು ಮಾತ್ರ ಬಿಡುತ್ತಿದ್ದೀರಿ. ಹೀಗಾಗಿ ನಮ್ಮ ಊರಿನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಭಟ್ಕಳ ಮತ್ತು ಮುಂಡಳ್ಳಿ, ನಸ್ತಾರಗೆ ಹೋಗುವ ಜನರಿಗೆ ತೊಂದರೆಯಾಗುತ್ತಿದೆ.  ಹೀಗಾಗಿ ಹೆಚ್ಚಿನ ಬಸ್ಗಳನ್ನ ಬಿಡುವಂತೆ ತಿಳಿಸಿದ್ದಾರೆ‌

ಕೋವಿಡ್ ಆರಂಭವಾಗುವುದಕ್ಕಿಂತ  ಮೊದಲು ಯಾವ ರೀತಿ ಸಮಯಕ್ಕೆ ಸರಿಯಾಗಿ ಅಂದರೆ ದಿನಕ್ಕೆ 10 ಬಸ್ಸುಗಳನ್ನು ಬಿಡುತ್ತಿದ್ದೀರೊ ಅದೇ ರೀತಿ ಬಸ್ಸುಗಳನ್ನು ಬಿಟ್ಟು ಊರ ಜನರಿಗೆ ಆಗುವ ತೊಂದರೆಯನ್ನು ಸರಿಪಡಿಸಿಕೊಡಬೇಕಾಗಿ  ವಿನಂತಿಸಿಕೊಂಡಿದ್ದಾರೆ..

ಈ ಸಂದರ್ಭದಲ್ಲಿ ಇನಾಯತುಲ್ಲಾ ಶಾಬಾಂದ್ರಿ, ಸಾಹಿಲ್ ಅಸೋಸಿಯೇಷನ್ ಅಧ್ಯಕ್ಷ ಲಯಿಕ್ ರುಕ್ನುದ್ದೀನ್ , ಕಾರ್ಯದರ್ಶಿ ಅಮ್ಮರ್ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...