ಕಾರವಾರ: ಬಳಸದೆ ನಿಲ್ಲಿಸಿಟ್ಟಿರುವ ನಿರುಪಯುಕ್ತ ದೋಣಿಗಳಿಂದ ಸೊಳ್ಳೆಗಳ ಉತ್ಪತ್ತಿ. ಸರಿಯಾಗಿ ಇಡುವಂತೆ ಮೀನುಗಾರಿಕೆ ಅಧಿಕಾರಿಗಳ ಎಚ್ಚರಿಕೆ
ಕಾರವಾರ: ಸಮುದ್ರ ಕಿನಾರೆಗಳಲ್ಲಿ ಮೀನುಗಾರಿಕೆಗೆ ಬಳಸದೆ ನಿಲ್ಲಿಸಿಟ್ಟಿರುವ ನಿರುಪಯುಕ್ತ ದೋಣಿಗಳಲ್ಲಿ ನೀರು ತುಂಬಿ, ನಿಂತ ನೀರಾಗಿ ಅಲ್ಲಿ ಲಾರ್ವಾ ಸೊಳ್ಳೆಗಳು ಹುಟ್ಟಿಕೊಂಡು, ಮಲೇರಿಯಾ ಹಾಗೂ ಡೆಂಗ್ಯೂ ರೋಗ ಹೆಚ್ಚಾಗುವ ಸಾಧ್ಯತೆ ಇರುವದರಿಂದ ಕಾರವಾರ, ಮಾಜಾಳಿ, ಮುದಗಾ, ಅಲಿಗದ್ದಾ ಸಮುದ್ರ ಕಿನಾರೆಗಳಲ್ಲಿ ನಿಲ್ಲಿಸಿದ ದೋಣಿಗಳನ್ನು ಅಡ್ಡವಾಗಿ ನಿಲ್ಲಿಸಿ ನೀರು ನಿಲ್ಲದಂತೆ ಮುಂಜಾಗೃತೆ ವಹಿಸಬೇಕೆಂದು ಕಾರವಾರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನೀರು ತುಂಬಿಕೊಂಡಿದ್ದು ಕಂಡು ಬಂದಲ್ಲಿ ಅಂತಹ ದೋಣಿಗಳ ನೋಂದಣಿಯನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗುವುದು ಹಾಗೂ ದೋಣಿ ಮಾಲಿಕರಿಗೆ ದಂಡ ವಿಧಿಸಲಾವುದು ಎಂದು ಎಚ್ಚರಿಕೆ ನೀಡಿದ್ದಾರೆ.